ಕಾರ್ಯಕ್ರಮಕ್ಕೂ ಮುನ್ನ ಮೂರು ಸಾವಿರ ಮಠದಿಂದ ಚನ್ನಮ್ಮ ವೃತ್ತದವರೆಗೆ ಡೊಳ್ಳು ಕುಣಿತ, ಜಗ್ಗಲಗಿ ಸೇರಿದಂತೆ ವಿವಿಧ ತಂಡಗಳಿಂದ ಮೆರವಣಿಗೆ ನಡೆಯಿತು. ಮನಸೂರ ಮಹಾಸಂಸ್ಥಾನ ಮಠದ ಬಸವರಾಜ ದೇವರು ರೇವಣಸಿದ್ದೇಶ್ವರ ಸ್ವಾಮೀಜಿ, ಮುಖಂಡರಾದ ಶಿವಾನಂದ ಕರಿಗಾರ, ಅಡಿವೆಪ್ಪ ಶಿವಳ್ಳಿ, ವೀರಭದ್ರಪ್ಪ ಹಾಲಹರವಿ, ವೆಂಕಟೇಶ ಮೇಸ್ತ್ರಿ, ಚಂದ್ರಶೇಖರ ಗೋಕಾಕ, ಪ್ರಭು ನವಲಗುಂದಮಠ, ಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ, ಉಪ ಮೇಯರ್ ಉಮಾ ಮುಕುಂದ, ಶಿವಾನಂದ ಜೋಗಿನ ಇದ್ದರು.