ಈ ವಿವಾದವನ್ನು ಪರಿಹರಿಸಲು ಬೆಂಗಳೂರಿನಿಂದ ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿ ಸದಸ್ಯರು ಬುಧವಾರ ಇಲ್ಲಿಗೆ ಬಂದಿದ್ದಾರೆ. ಶಾಲೆಯ ವಿವಾದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿ ನೋಡಿ ಶಾಲೆ ಹಾಗೂ ಗೃಹ ನಿರ್ಮಾಣ ಸಂಘದ ಗುದ್ದಾಟದಲ್ಲಿ ಮಕ್ಕಳು ಹಾಗೂ ಶಿಕ್ಷಕರ ಭವಿಷ್ಯ ಅತಂತ್ರಕ್ಕೆ ಸಿಲುಕುವುದು ಬೇಡ. ಮಕ್ಕಳ ಹಿತದೃಷ್ಟಿಯಿಂದ ನೆರವಾಗುವುದಾಗಿ ಸುದೀಪ್ ಮೂರು ದಿನಗಳ ಹಿಂದೆ ಭರವಸೆ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಶಾಲಾ ಮಕ್ಕಳಿಂದ, ಸ್ಥಳೀಯರಿಂದ ಮಾಹಿತಿ ಪಡೆಯುವುದಾಗಿ ತಿಳಿಸಿದ್ದರು. ಅದರಂತೆ ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿ ಸದಸ್ಯರು ಬಂದಿದ್ದು, ಶಾಲಾ ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸುತ್ತಿದ್ದಾರೆ.