ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಶಾಲಾ ವಿವಾದ ಬಗೆಹರಿಸಲು ಬಂದ‌ ನಟ ಸುದೀಪ ಚಾರಿಟಬಲ್ ಸೊಸೈಟಿ ಸದಸ್ಯರು

Last Updated 17 ಮಾರ್ಚ್ 2021, 6:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲೀಸ್ ಅವಧಿ ಮುಗಿದರೂ ಜಾಗ ತೆರವು ‌ಮಾಡದ ಕಾರಣ ಇಲ್ಲಿನ ಹರಿಜನ ಹೆಣ್ಣು ಮಕ್ಕಳ ಪ್ರಾಥಮಿಕ ಅನುದಾನಿತ ಶಾಲೆ ಹಾಗೂ ಲೀಸ್ ನೀಡಿದ್ದ ಗಾಂಧಿವಾಡ ಗೃಹ ನಿರ್ಮಾಣ ಸಹಕಾರಿ ಸಂಘ ನಿಯಮಿತ ನಡುವೆ ಗುದ್ದಾಟ‌ ನಡೆದಿತ್ತು.

ಈ ವಿವಾದವನ್ನು ಪರಿಹರಿಸಲು ಬೆಂಗಳೂರಿನಿಂದ ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿ ಸದಸ್ಯರು ಬುಧವಾರ ಇಲ್ಲಿಗೆ ಬಂದಿದ್ದಾರೆ. ಶಾಲೆಯ ವಿವಾದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿ‌ ನೋಡಿ ಶಾಲೆ ಹಾಗೂ ಗೃಹ ನಿರ್ಮಾಣ ಸಂಘದ ಗುದ್ದಾಟದಲ್ಲಿ ಮಕ್ಕಳು ಹಾಗೂ ಶಿಕ್ಷಕರ ಭವಿಷ್ಯ ಅತಂತ್ರಕ್ಕೆ ಸಿಲುಕುವುದು ಬೇಡ. ಮಕ್ಕಳ‌ ಹಿತದೃಷ್ಟಿಯಿಂದ ನೆರವಾಗುವುದಾಗಿ ಸುದೀಪ್ ‌ಮೂರು ದಿನಗಳ‌ ಹಿಂದೆ ಭರವಸೆ ‌ನೀಡಿದ್ದರು. ಸ್ಥಳಕ್ಕೆ ಭೇಟಿ‌ ನೀಡಿ ಶಾಲಾ ಮಕ್ಕಳಿಂದ, ಸ್ಥಳೀಯರಿಂದ ಮಾಹಿತಿ ಪಡೆಯುವುದಾಗಿ ತಿಳಿಸಿದ್ದರು. ಅದರಂತೆ ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿ ಸದಸ್ಯರು ಬಂದಿದ್ದು, ಶಾಲಾ ಆಡಳಿತ ಮಂಡಳಿ ಜೊತೆ ಚರ್ಚೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT