ಘಟನೆ ವಿವರ: ಇಲ್ಲಿಯ ಸಹಾಯಕ ಕೃಷಿ ಅಧಿಕಾರಿ ಬಿ.ಆರ್. ಹುಲಗಣ್ಣವರ ಎಂಬುವರಿಗೆ ಕರೆ ಮಾಡಿ ನಾವು ಎಸಿಬಿ ಅಧಿಕಾರಿಗಳಿದ್ದು, ನೀವು ಬೇನಾಮಿ ಆಸ್ತಿ ಸಂಪಾದಿಸಿದ್ದೀರಿ ಎನ್ನುವ ದೂರು ಬಂದಿದೆ. ನೀವು ಈಗ ನಿವೃತ್ತಿ ಅಂಚಿನಲ್ಲಿದ್ದೀರಿ. ನಿಮ್ಮ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿದರೆ ಪಿಂಚಣಿ ಸಿಗುವುದಿಲ್ಲ. ಆದ್ದರಿಂದ ₹5 ಲಕ್ಷ ನೀಡಿ ’ಹೊಂದಾಣಿಕೆ‘ ಮಾಡಿಕೊಳ್ಳಿ ಎನ್ನುವ ಬೇಡಿಕೆ ಇಟ್ಟಿದ್ದಾರೆ ಎಂದು ಸರ್ಕಾರಿ ಅಧಿಕಾರಿ ಸೆ. 15ರಂದು ದೂರು ದಾಖಲಿಸಿದ್ದರು. ಬಂಧಿತರಿಂದ ಒಂದು ಕಾರ್, ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ.