‘ಡಿ. 27ರಂದು ಬೆಳಿಗ್ಗೆ 11.30ಕ್ಕೆ ಕಲಾವಿದ ಜಿ.ಆರ್. ಮಲ್ಲಾಪುರ ಅವರಿಂದ ಹಾಗೂ ಡಿ. 28ರಂದು ಮಧ್ಯಾಹ್ನ 3ಕ್ಕೆ ಕಲಾವಿದ ಕೆ.ವಿ. ಶಂಕರ ಅವರಿಂದ ಚಿತ್ರಕಲೆ ಪ್ರಾತ್ಯಕ್ಷಿಕೆ ನಡೆಯಲಿದೆ. ಬಳ್ಳಿ, ಹೂವು, ಮರ, ಗಿಡ, ಹಣ್ಣು ಹೀಗೆ 50 ನಿಸರ್ಗ ಕಲಾಕೃತಿ ಪ್ರದರ್ಶನಗೊಳ್ಳಲಿದೆ. ನಿಸರ್ಗದಲ್ಲಿ ನೀನು, ನಾನು ಎನ್ನುವ ಕಲ್ಪನೆಯಲ್ಲಿ ಚಿತ್ರ ರಚಿಸಿದ್ದು, ಪ್ರದರ್ಶನಕ್ಕೂ ‘ನೀನಾ’ ಎಂದು ಹೆಸರು ಇಟ್ಟಿದ್ದೇವೆ. ಉಚಿತ ಪ್ರವೇಶವಿದ್ದು, ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಪ್ರದರ್ಶನ ನಡೆಯಲಿದೆ’ ಎಂದರು.