ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು 50ಕ್ಕೂ ಕಾರ್ಮಿಕರ ಪಾದಪೂಜೆ ನೆರವೇರಿಸಿದ ಅವರು, ‘ಪೌರ ಕಾರ್ಮಿಕರು ಮಳೆ, ಗಾಳಿ ಹಾಗೂ ಮಳೆ ಬಿಸಿಲೆನ್ನದೆ ಪ್ರತಿದಿನ ಮಹಾನಗರವನ್ನು ಸ್ವಚ್ಛವಾಗಿರಿಸುತ್ತಾರೆ. ಅವರ ಪಾದ ಪೂಜೆ ಮಾಡಿ ಈ ದಿನವನ್ನು ವಿಶೇಷವಾಗಿ ಆಚರಿಸಿದ್ದಕ್ಕೆ ಖುಷಿಯಾಗಿದೆ’ ಎಂದರು.