‘ಪಾಲಿಕೆ ನೀಡಿದ ತುರ್ತು ಸೇವಾ ಪಾಸ್ ತೋರಿಸಿದರೂ ಪೊಲೀಸ್ ಅಧಿಕಾರಿ ತಾಳ್ಮೆ ಇಲ್ಲದಂತೆ ನಡೆದುಕೊಂಡು ಲಾಠಿಯಿಂದ ಹೊಡದಿದ್ದಾರೆ. ಸರ್ಕಾರಿ ಅಧಿಕಾರಿ ಜೊತೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದರಿಂದ ಪಾಲಿಕೆಯ ನೌಕರರ ಘನತೆಗೆ ಧಕ್ಕೆ ಉಂಟಾಗಿದೆ. ಕರ್ತವ್ಯ ನಿರತ ಪಾಲಿಕೆ ಸಿಬ್ಬಂದಿಗೆ ಭದ್ರತೆಯೇ ಇಲ್ಲದಂತಾಗಿದ್ದು, ಕೂಡಲೇ ಈ ಕುರಿತು ಕ್ರಮ ತೆಗೆದುಕೊಳ್ಳಬೇಕು’ ಎಂದು ಅಂಗಡಿ ಅವರು ಪಾಲಿಕೆಯ ಆಯಕ್ತ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದ್ದಾರೆ.