ನವಲಗುಂದ: ಯುವಕ ಗಂಗಾಧರ ತೊರವಿ ಎಂಬುವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ನಾಗರಾಜ ವಡ್ಡರ, ಪ್ರಹ್ಲಾದ ಬೆಳವಟಿ ಮತ್ತು ಬರಮಪ್ಪ ವಡ್ಡರ ಎಂಬುವರನ್ನು ನವಲಗುಂದ ಪೋಲಿಸರು ಬಂಧಿಸಿದ್ದಾರೆ.
ಅಣ್ಣಿಗೇರಿ ತಾಲ್ಲೂಕಿನ ಬಸಪೂರ ಹೊಸ ಗ್ರಾಮದ ನಿವೇಶ ಹಂಚಿಯಲ್ಲಿ ತಹಶೀಲ್ದಾರ್ ನವೀನ ಹುಲ್ಲೂರ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಗಂಗಾಧರ ಲೋಕಾಯುಕ್ತಕ್ಕೆ ದೂರು ನೀಡಿದ ನಂತರ ಹಲ್ಲೆ ನಡೆದಿತ್ತು.