<p><strong>ಧಾರವಾಡ:</strong> ಮಾನವಶಾಸ್ತ್ರ ಅಧ್ಯಯನ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾನವಶಾಸ್ತ್ರ ಅಧ್ಯಯನಕ್ಕೆ ಮಹತ್ವ ನೀಡಲಾಗಿದೆ ಎಂದು ಚಾಮರಾಜನಗರ ವಿ.ವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ ಹೇಳಿದರು.</p>.<p>ಕರ್ನಾಟಕ ಅಂಥ್ರೋಪೋಲಾಜಿಕಲ್ ಸೊಸೈಟಿಯ ವಾರ್ಷಿಕೋತ್ಸವದ ಅಂಗವಾಗಿ ನಗರದ ರಾಶಿ ಫಾರ್ಮ್ಸ್ನಲ್ಲಿ ಈಚೆಗೆ ನಡೆದ ವಿಶ್ವ ಮಾನವಶಾಸ್ತ್ರ ದಿನಾಚರಣೆಯಲ್ಲಿ ಮಾತನಾಡಿದರು.</p>.<p>ಮಾನವನ ಸಾಂಸ್ಕೃತಿಕ ಪರಂಪರೆಯ ಅಧ್ಯಯನದ ಅವಶ್ಯಕತೆ ಇದೆ. ಭಾರತೀಯ ಸಂಪ್ರದಾಯ ಪರಂಪರೆ ಜಗತ್ತಿನಲ್ಲೇ ಅತ್ಯಂತ ಪುರಾತನ ಕಾಲದಿಂದಲೂ ಇದೆ. ಭಾರತೀಯ ಜ್ಞಾನ ಪರಂಪರೆಯು ಸಂಸ್ಕೃತಿ, ಪರಂಪರೆ, ಯೋಗ, ಆಯುರ್ವೇದದ ಪರಂಪರೆಯನ್ನು ಹೊಂದಿದೆ ಎಂದರು.</p>.<p>ಪ್ರೊ.ಜೈ ಪ್ರಭಾಕರ ಎಸ್.ಸಿ ಮಾತನಾಡಿ, ಮಾನವಶಾಸ್ತ್ರವು ಮಾನವನ ಸಂಸ್ಕೃತಿಯ ಅಧ್ಯಯನವಾಗಿದೆ. ಅಂಥ್ರೊಪಲೋಜೊಕಲ್ ಸೊಸೈಟಿಯು ಹೆಚ್ಚು ಚಟುವಟಿಕೆಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.</p>.<p>ಕರ್ನಾಟಕ ವಿ.ವಿ ಪ್ರಾಧ್ಯಾಪಕ ಎಸ್.ಸಿ.ಸುಗಂದಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾನವಶಾಸ್ತ್ರ ವಿಷಯವನ್ನು ಪರೀಕ್ಷಾರ್ಥಿಗಳು ಆಯ್ದುಕೊಳ್ಳುತ್ತಿರುವುದು ಮಾನವಶಾಸ್ತ್ರ ಮಹತ್ವವನ್ನು ತೋರಿಸುತ್ತದೆ. ಮಾನವನ ಇಡೀ ಅನ್ವೇಷಣೆಯ ಕುರಿತು ಮಾನವಶಾಸ್ತ್ರ ಅಧ್ಯಯನ ಮಾಡುತ್ತಿದೆ ಎಂದು ತಿಳಿಸಿದರು.</p>.<p>ಕರ್ನಾಟಕ ಅಂಥ್ರೊಪೊಲೋಜಿಕಲ್ ಸೊಸೈಟಿ ಅಧ್ಯಕ್ಷರಾದ ಶ್ರೀನಿವಾಸ ಶಾಸ್ತ್ರಿ ಮಾತನಾಡಿದರು. ಕಾರ್ಯದರ್ಶಿ ಪ್ರೊ.ಮಲ್ಲಿಕಾರ್ಜುನ ಕಾಂಬಳೆ ವಾರ್ಷಿಕ ವರದಿ ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ಮಾನವಶಾಸ್ತ್ರ ಅಧ್ಯಯನ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾನವಶಾಸ್ತ್ರ ಅಧ್ಯಯನಕ್ಕೆ ಮಹತ್ವ ನೀಡಲಾಗಿದೆ ಎಂದು ಚಾಮರಾಜನಗರ ವಿ.ವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ ಹೇಳಿದರು.</p>.<p>ಕರ್ನಾಟಕ ಅಂಥ್ರೋಪೋಲಾಜಿಕಲ್ ಸೊಸೈಟಿಯ ವಾರ್ಷಿಕೋತ್ಸವದ ಅಂಗವಾಗಿ ನಗರದ ರಾಶಿ ಫಾರ್ಮ್ಸ್ನಲ್ಲಿ ಈಚೆಗೆ ನಡೆದ ವಿಶ್ವ ಮಾನವಶಾಸ್ತ್ರ ದಿನಾಚರಣೆಯಲ್ಲಿ ಮಾತನಾಡಿದರು.</p>.<p>ಮಾನವನ ಸಾಂಸ್ಕೃತಿಕ ಪರಂಪರೆಯ ಅಧ್ಯಯನದ ಅವಶ್ಯಕತೆ ಇದೆ. ಭಾರತೀಯ ಸಂಪ್ರದಾಯ ಪರಂಪರೆ ಜಗತ್ತಿನಲ್ಲೇ ಅತ್ಯಂತ ಪುರಾತನ ಕಾಲದಿಂದಲೂ ಇದೆ. ಭಾರತೀಯ ಜ್ಞಾನ ಪರಂಪರೆಯು ಸಂಸ್ಕೃತಿ, ಪರಂಪರೆ, ಯೋಗ, ಆಯುರ್ವೇದದ ಪರಂಪರೆಯನ್ನು ಹೊಂದಿದೆ ಎಂದರು.</p>.<p>ಪ್ರೊ.ಜೈ ಪ್ರಭಾಕರ ಎಸ್.ಸಿ ಮಾತನಾಡಿ, ಮಾನವಶಾಸ್ತ್ರವು ಮಾನವನ ಸಂಸ್ಕೃತಿಯ ಅಧ್ಯಯನವಾಗಿದೆ. ಅಂಥ್ರೊಪಲೋಜೊಕಲ್ ಸೊಸೈಟಿಯು ಹೆಚ್ಚು ಚಟುವಟಿಕೆಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.</p>.<p>ಕರ್ನಾಟಕ ವಿ.ವಿ ಪ್ರಾಧ್ಯಾಪಕ ಎಸ್.ಸಿ.ಸುಗಂದಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾನವಶಾಸ್ತ್ರ ವಿಷಯವನ್ನು ಪರೀಕ್ಷಾರ್ಥಿಗಳು ಆಯ್ದುಕೊಳ್ಳುತ್ತಿರುವುದು ಮಾನವಶಾಸ್ತ್ರ ಮಹತ್ವವನ್ನು ತೋರಿಸುತ್ತದೆ. ಮಾನವನ ಇಡೀ ಅನ್ವೇಷಣೆಯ ಕುರಿತು ಮಾನವಶಾಸ್ತ್ರ ಅಧ್ಯಯನ ಮಾಡುತ್ತಿದೆ ಎಂದು ತಿಳಿಸಿದರು.</p>.<p>ಕರ್ನಾಟಕ ಅಂಥ್ರೊಪೊಲೋಜಿಕಲ್ ಸೊಸೈಟಿ ಅಧ್ಯಕ್ಷರಾದ ಶ್ರೀನಿವಾಸ ಶಾಸ್ತ್ರಿ ಮಾತನಾಡಿದರು. ಕಾರ್ಯದರ್ಶಿ ಪ್ರೊ.ಮಲ್ಲಿಕಾರ್ಜುನ ಕಾಂಬಳೆ ವಾರ್ಷಿಕ ವರದಿ ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>