ತಾಳಿಕೋಟೆ ಯುದ್ಧದ ನಂತರ ಧಾರವಾಡ ಸ್ವತಂತ್ರಗೊಂಡಿತಾದರೂ, 1573ರಲ್ಲಿ ಬಿಜಾಪುರದ ಸುಲ್ತಾನರು ನಗರವನ್ನು ತಮ್ಮ ಕೈವಶ ಮಾಡಿಕೊಂಡರು. ಆದಿಲ್ ಶಾಹಿ ಕಾಲದಲ್ಲಿ ಮನ್ನ ಕಿಲ್ಲಾದಲ್ಲಿ ಸುಂದರ ಕೋಟೆ ನಿರ್ಮಿಸಲಾಯಿತು. ಹೀಗೆ ಕಾಲ ಕಳೆದಂತೆ ಮೊಗಲರು, ಪೇಶ್ವೆಯರು, ಹೈದರಾಲಿ, ಟಿಪ್ಪು ಹಾಗೂ ಅಂತಿಮವಾಗಿ ಬ್ರಿಟಿಷರು ಧಾರವಾಡವನ್ನು ತಮ್ಮ ವಶ ಮಾಡಿಕೊಳ್ಳಲು ಹಾತೊರೆದರು ಎಂಬುದು ಇತಿಹಾಸ.