‘ಜನವರಿ 22ರಂದು ಬಣವಿ ಅವರನ್ನು ಕೊಲೆ ಮಾಡಿ ₹11.15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರು ಜನರ ತಂಡ ದೋಚಿ ಪರಾರಿಯಾಗಿತ್ತು. ಅವರ ಪೈಕಿ ಆರೋಪಿ ಮಾಣಿಕ್ನನ್ನು ಬಂಧಿಸಲಾಗಿದೆ. ಅವನ ವಿರುದ್ಧ ರಾಜಸ್ಥಾನ, ಛತ್ತೀಸಗಡ, ಕೇರಳ ರಾಜ್ಯದ ವಿವಿಧ ಠಾಣೆಗಳಲ್ಲಿ ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ತಿಹಾರ ಜೈಲಿನಲ್ಲಿ ಐದು ವರ್ಷ ಶಿಕ್ಷೆ ಅನುಭವಿಸಿರುವ ಕುರಿತೂ ಮಾಹಿತಿ ದೊರೆತಿದೆ’ ಎಂದು ತಿಳಿಸಿದರು.