ಮುಖ್ಯಮಂತ್ರಿ ಸ್ಥಾನ ಕುರಿತು ಸ್ವಾಮೀಜಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯಲ್ಲಿ ನನ್ನಷ್ಟು ಅರ್ಹತೆ ಹಾಗೂ ಯೋಗ್ಯತೆ ಯಾರಿಗಿದೆ? ಸಚಿವ ಸಂಪುಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಕ್ಕೆ ವಾಜಪೇಯಿ ಅವರ ಹಸ್ತಾಕ್ಷರದಲ್ಲಿ ಮೆಚ್ಚುಗೆ ಪತ್ರ ಪಡೆದ ವ್ಯಕ್ತಿ ನಾನು. ದುರ್ದೈವ ಅಂದರೆ ರಾಜಕಾರಣದಲ್ಲಿ ನೇರವಾಗಿ ಮಾತನಾಡಬಾರದು. ಇಲ್ಲಿ ಚಮಚಾಗಿರಿ ಮಾಡಬೇಕು. ನನಗೆ ಅದು ಹಿಡಿಸದ ಕಾರಣ ನಾನು ಹಿಂದುಳಿದಿದ್ದೇನೆ’ ಖಾರವಾಗಿ ಪ್ರತಿಕ್ರಿಯಿಸಿದರು.