ಬಸವ ಜಯಂತಿ ಅಂಗವಾಗಿ ನಗರದ ಪಿ.ಸಿ. ಜಾಬಿನ ಕಾಲೇಜಿನಲ್ಲಿ ಪಿ.ಸಿ. ಜಾಬಿನ ಪರಿವಾರ ಬುಧವಾರ ಆಯೋಜಿಸಿದ್ದ ‘ಶರಣ ಚಿಂತನೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಸವಣ್ಣನ ವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸುಭಿಕ್ಷವಾಗುತ್ತದೆ. ಅವರು ಹೇಳಿದ ಕಾಯಕ ಹಾಗೂ ದಾಸೋಹವನ್ನು ಎಲ್ಲರೂ ಪಾಲಿಸಬೇಕು. ಅದಕ್ಕೆ, ಕೇವಲಒಂದು ಶಿಕ್ಷಣ ಸಂಸ್ಥೆಯಿಂದ ಆರಂಭಗೊಂಡ ಕೆಎಲ್ಇ ಸಂಸ್ಥೆಯು, ಇಂದು 287 ಶಿಕ್ಷಣ ಸಂಸ್ಥೆಗಳಾಗಿ ವಿಸ್ತರಿಸಿರುವುದೇ ಸಾಕ್ಷಿ’ ಎಂದರು.