ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ನಗರ ತಂಡಕ್ಕೆ ಜಯ

ಕೆಎಸ್‌ಸಿಎ ಅಂತರ ಜಿಲ್ಲಾ ಕ್ರಿಕೆಟ್‌ ಟೂರ್ನಿಗೆ ತೆರೆ
Last Updated 19 ಏಪ್ರಿಲ್ 2019, 19:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಮರ್ಥ್‌ ಪವಾಲೆ (29ಕ್ಕೆ5) ಚುರುಕಿನ ಬೌಲಿಂಗ್ ಬಲದಿಂದ ಬೆಳಗಾವಿ ನಗರ ತಂಡ ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ 14 ವರ್ಷದ ಒಳಗಿನವರ ಅಂತರ ಜಿಲ್ಲಾ ಕ್ರಿಕೆಟ್‌ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ 101 ರನ್‌ಗಳ ಗೆಲುವು ಸಾಧಿಸಿತು.

ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬೆಳಗಾವಿ ನಗರ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 201 ರನ್ ಕಲೆಹಾಕಿತು. ಎದುರಾಳಿ ಹುಬ್ಬಳ್ಳಿ ನಗರ ತಂಡ 37 ಓವರ್‌ಗಳಲ್ಲಿ 101 ರನ್ ಗಳಿಸುವಷ್ಟರಲ್ಲಿ ಆಲೌಟ್‌ ಆಯಿತು.

ಸಮರ್ಥ್‌ ಹತ್ತು ಓವರ್‌ ಬೌಲಿಂಗ್‌ನಲ್ಲಿ ಎರಡು ಮೇಡನ್‌ ಮಾಡಿದರು. 29 ರನ್‌ ಮಾತ್ರ ನೀಡಿದರು.

ಟೂರ್ನಿ ಮುಕ್ತಾಯ:

14 ವರ್ಷದ ಒಳಗಿನವರಿಗೆ ನಡೆಯುವ ಅಂತರ ವಲಯ ಕ್ರಿಕೆಟ್ ಟೂರ್ನಿಗೆ ಧಾರವಾಡ ವಲಯ ತಂಡವನ್ನು ಆಯ್ಕೆ ಮಾಡಲು ಈ ಟೂರ್ನಿ ಆಯೋಜಿಸಲಾಗಿತ್ತು.

ವಲಯದ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಗದಗ ಮತ್ತು ಕಾರವಾರ ತಂಡಗಳು ಪಾಲ್ಗೊಂಡಿದ್ದವು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ 20 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ತರಬೇತಿ ನೀಡಲಾಗುತ್ತದೆ.

ಸಂಕ್ಷಿಪ್ತ ಸ್ಕೋರು: ಬೆಳಗಾವಿ ನಗರ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ201 (ಸಾತ್ವಿಕ್‌ ಸಮಂತ್‌ 37, ಸಿದ್ದೇಶ ಅಸಲಕರ 19, ಜಿ. ಜೀತ್‌ 34, ಉತ್ಕರ್ಷ್‌ ಶಿಂಧೆ 12, ಅಕ್ಷಯ್‌ ಬಗಾಡಿ ಔಟಾಗದೆ 15; ಕುಣಾಲ್‌ ಶಾನಭಾಗ್ 23ಕ್ಕೆ1, ಸಾಗರ ಬನಹಟ್ಟಿ 37ಕ್ಕೆ2, ಮಣಿಕಂಠ ಬುಕಿಟ್ಕರ್‌ 13ಕ್ಕೆ2). ಹುಬ್ಬಳ್ಳಿ ನಗರ ತಂಡ 37 ಓವರ್‌ಗಳಲ್ಲಿ 100 (ವೀರಜ್‌ ಹಾವೇರಿ 11, ಮಣಿಕಂಠ ಬುಕಿಟ್ಕರ್‌ 33, ಅಬ್ದುಲ್‌ ಸಮೀ ದಿವಾನ್‌ಅಲಿ 13; ಅರ್ಜುನ ಜಗದೀಶ 10ಕ್ಕೆ2, ಸಮರ್ಥ್ ಪವಾಲೆ 29ಕ್ಕೆ5, ಹರ್ಷ ಪಟೇಲ 9ಕ್ಕೆ1, ಜಿ. ಜೀತ್‌ 9ಕ್ಕೆ1). ಫಲಿತಾಂಶ: ಬೆಳಗಾವಿ ನಗರ ತಂಡಕ್ಕೆ 101 ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT