ಅಭಿಯಾನದ ಸಂಯೋಜಕಿ ಹಾಗೂ ಹವ್ಯಕ ಮಹಿಳಾ ಮಂಡಳದ ಅಧ್ಯಕ್ಷೆ ವೀಣಾ ಹೆಗಡೆ ಹಾಗೂ ಇತರ ಸದಸ್ಯರ ನೇತೃತ್ವದಲ್ಲಿ ಭಗವದ್ಗೀತೆಯ 18 ಅಧ್ಯಾಯಗಳನ್ನು 200ಕ್ಕೂ ಹೆಚ್ಚು ಮಂದಿ ಪಠಣ ಮಾಡಿದರು. ಭಗವದ್ಗೀತಾ ಅಭಿಯಾನದ ಕಾರ್ಯಾಧ್ಯಕ್ಷ ಎ.ಸಿ. ಗೋಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ್ ಗುಮಾಸ್ತೆ ಸ್ವಾಮೀಜಿ ಅವರ ಪರಿಚಯ ಮಾಡಿದರು. ಕಾರ್ಯದರ್ಶಿ ಸುದರ್ಶನ್ ಜಿ.ಎಸ್ ವಂದಿಸಿದರು. ಶ್ರೀಕಾಂತ ಹೆಗಡೆ, ಟಿ.ಎಸ್. ಭಟ್, ಸಂಯೋಜಕ ಅರವಿಂದ ಮುತ್ತಗಿ, ಮನೋಹರ ಪರ್ವತಿ ಹಾಗೂ ಸುರೇಶ್ ಹೆಗ್ಡೆ ಇದ್ದರು.