ಪ್ರತಿಪಕ್ಷ ನಾಯಕರು ಚುನಾವಣೆ ಸಂದರ್ಭದಲ್ಲಿ ಯಾರದ್ದೋ ಮುಖಮಸಿ ಮಾಡಬಾರದು, ಸಿಎಂ ಆಗಿದ್ದವರು. ಪಕ್ಷ ಮೀರಿ ಯೋಚಿಸಬೇಕಿದೆ. ವೇಗವಾಗಿ ಸ್ಟೇಟ್ ಮೆಂಟ್ ಮಾಡಬಾರದು. ಯಾರ ಬಗ್ಗೆ ಆರೋಪ ಎಂದು ಹೇಳಲ್ಲ. ಕಾಂಗ್ರೆಸ್ ಇರಬಹುದು, ಬಿಜೆಪಿಯರು ಇರಬಹುದು, ಕಾನೂನಿನ ಸೂತ್ರದಡಿ ತರಲಾಗುತ್ತದೆ. ರೆಗ್ಯುಲರ್ ಪೊಲೀಸ್ ತನಿಖೆ ಆಗುತ್ತಿಲ್ಲ. ಪರಿಣಿತ ಪೊಲೀಸರ ತಂಡ ತನಿಖೆ ಮಾಡುತ್ತಿದೆ. ಎಲ್ಲವೂ ಊಹೆಯಿಂದ ಮಾತನಾಡಲು ಆಗಲ್ಲ. ಎಲ್ಲವೂ ಅಂತೆ ಕಂತೆ ಎಂದರು.