ಸರಸ್ವತಿ ಸದನದಲ್ಲಿ ಸೇವಾ ಭಾರತಿ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ಹಿರಿಯ ನಾಗರಿಕರ ಮಿಲನ ‘ಸಮಾಜಕ್ಕಾಗಿ ಹಿರಿಯರ ಮಾರ್ಗದರ್ಶನ ಮತ್ತು ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮನುಷ್ಯನಿಗೆ ಭಗವಂತ ಕೊಟ್ಟಿರುವುದು 120 ವರ್ಷ ಆಯಸ್ಸು.ಆದರೆ, ಎಲ್ಲರೂ ಅಷ್ಟು ವರ್ಷ ಬದುಕಲು ಸಾಧ್ಯವಿಲ್ಲ. ಇರುವಷ್ಟು ದಿನ ಸುಖವಾಗಿ ಬದುಕಬೇಕು. ಹಿರಿಯ ನಾಗರಿಕರು ಸದಾ ಕ್ರಿಯಾಶೀಲವಾಗಿರಬೇಕು’ ಎಂದರು.