ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಹೆಗ್ಗೇರಿಯಲ್ಲಿರುವ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಮೇ 4ರಿಂದ 6ರವರೆಗೆ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಎಲ್ಲ ವಯಸ್ಸಿನವರಲ್ಲಿ ಕಂಡು ಬರುವ ಬೆನ್ನಿನಿಂದ ಕಾಲಿನ ಬೆರಳುಗಳವರೆಗೆ ನೋವು ಕಾಣಿಸಿಕೊಳ್ಳುವುದು, ನಡೆಯಲು ತೊಂದರೆ ಸೇರಿ ಇನ್ನಿತರ ಕಾಯಿಲೆಗಳಿಗೆ ಶಲ್ಯತಂತ್ರ ವಿಭಾಗದ ವತಿಯಿಂದ ವಿಶೇಷ ಸಲಹಾ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.