ಹುಬ್ಬಳ್ಳಿ: ವಿದ್ಯುತ್ ಪರಿವರ್ತಕ ಬದಲಾಯಿಸಲು ಗ್ರಾಹಕರಿಂದ ಹಣ ಪಡೆದ ವಿಜಯಪುರದ ನವರಸಪುರ ಶಾಖೆ ಶಾಖಾಧಿಕಾರಿ ರಮೇಶ ಗುಗ್ಗರಿ ಎಂಬುವವರನ್ನು ಅಮಾನತು ಮಾಡಲಾಗಿದೆ.
ಪರಿವರ್ತಕ ಬದಲಿಸಿ ಕೊಡಲು ₹6 ಸಾವಿರ ಹಣ ಪಡೆದಿರುವ ಬಗ್ಗೆ ಗ್ರಾಹಕರು ಸಲ್ಲಿಸಿರುವ ದೂರು ಹಾಗೂ ವಿಜಯಪುರ ವೃತ್ತ ಕಚೇರಿಯ ವರದಿ ಆಧರಿಸಿ ತಕ್ಷಣದಿಂದ ಅಮಾನತು ಮಾಡಲಾಗಿದೆ ಎಂದು ಹುಬ್ಬಳ್ಳಿ ಹೆಸ್ಕಾಂ ಕಚೇರಿ ಪ್ರಧಾನ ವ್ಯವಸ್ಥಾಪಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.