ಷಿಕಾಗೊದಲ್ಲಿ ಇತ್ತೀಚಿಗೆ ನಡೆದ ಅಕ್ಷಿಪಟಲ ತಜ್ಞರ 37ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಶ್ರೀನಿವಾಸ ಅವರು ಮಧುಮೇಹದಿಂದ ಅಕ್ಷಿಪಟಲದಲ್ಲಿ ಅತಿ ವೇಗವಾಗಿ ಬೆಳೆಯುವ ಮೆಂಬರೇನ್, ಅಕ್ಷಿಪಟಲದ ಚದುರುವಿಕೆ ನಿವಾರಿಸುವ ಕುರಿತು ಹಾಗೂ ಅದನ್ನು ತಡೆಗಟ್ಟಲು ಇರುವ ಹೊಸ ತಂತ್ರಜ್ಞಾನಗಳ ಬಗ್ಗೆ ವಿಧಾನದ ವಿಡಿಯೊ ಪ್ರದರ್ಶಿಸಿದ್ದರು. ಸಮ್ಮೇಳನದಲ್ಲಿ 3,000ಕ್ಕೂ ಹೆಚ್ಚು ಖ್ಯಾತ ಅಕ್ಷಿಪಟಲ ತಜ್ಞರು, ಶಸ್ತ್ರಚಿಕಿತ್ಸಕರು ಪಾಲ್ಗೊಂಡಿದ್ದರು.