ಹುಬ್ಬಳ್ಳಿ: ನಗರದ ದೇಶಪಾಂಡೆ ನಗರದಲ್ಲಿರುವ ಕರ್ನಾಟಕ ಜಿಮ್ಖಾನ ಅಸೋಷಿಯೇಷನ್ನಲ್ಲಿ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ವತಿಯಿಂದ ನಡೆದ ಬಂಟ್ಸ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಸುಗ್ಗಿ ಸುಧಾಕರ ಶೆಟ್ಟಿ ಮಾಲೀಕತ್ವದ ‘ಸುಗ್ಗಿ ಎಸಸ್’ ತಂಡ ಚಾಂಪಿಯನ್ ಆಯಿತು. ರವಿಕಾಂತ ಶೆಟ್ಟಿ ಮಾಲೀಕತ್ವದ ‘ಲೀಲಾವತಿ ಲಯನ್ಸ್’ ತಂಡವನ್ನು 3-2ರಿಂದ ಸೋಲಿಸಿದ ಸುಗ್ಗಿ ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ವಿಜೇತ ಹಾಗೂ ರನ್ನರ್ಅಪ್ ತಂಡಗಳಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ ಹಾಗೂ ಉಪನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿಚಂದ ಡಿ.ಬಿ. ಟ್ರೋಫಿ ಮತ್ತು ಬಹುಮಾನ ವಿತರಿಸಿದರು.
ಪಂದ್ಯಾವಳಿಯಲ್ಲಿ ರವೀಂದ್ರ ಶೆಟ್ಟಿ ಮಾಲೀಕತ್ವದ ‘ಡಿಯರ್ಕಾನ್’, ಸುಭಾಶ್ಚಂದ್ರ ಶೆಟ್ಟಿ ಅವರ ‘ಜೀವನ್ ವಾರಿಯರ್ಸ್’, ಪ್ರದೀಪ ಪಕ್ಕಳ ಅವರ ‘ಮಂದಾರ ಮಿರ್ಯಾಕಲ್ಸ್’, ‘ಸುಧೀರ್ ಜೆ. ಶೆಟ್ಟಿ ಮಾಲೀಕತ್ವದ ‘ಮೆಟ್ಕಟ್’ ಸೇರಿದಂತೆ ಆರು ತಂಡಗಳು ಭಾಗವಹಿಸಿದ್ದವು.
ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಸತೀಶ ಶೆಟ್ಟಿ, ಕ್ರೀಡಾ ಸಂಚಾಲಕ ಪುರಂದರ ರೈ, ಜಂಟಿ ಕಾರ್ಯದರ್ಶಿ ರಾಜೇಂದ್ರ ವಿ. ಶೆಟ್ಟಿ ಮತ್ತು ಉಪಾಧ್ಯಕ್ಷರಾದ ಶಾಂತಾರಾಮ ಶೆಟ್ಟಿ ಹಾಗೂ ಸದಸ್ಯರು ಇದ್ದರು.