ಮುಖ್ಯಮಂತ್ರಿ ಪದೇಪದೇ ದೆಹಲಿ ಹೋಗುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಸಿದ ಅವರು, ‘ಕೆಲವು ಕಡತಗಳು ಮುಂದಕ್ಕೆ ಹೋಗದೆ ನಿಂತಲ್ಲೇ ನಿಂತಿರುತ್ತವೆ. ಅವುಗಳ ಕೆಲಸಕ್ಕೆ ಹೋಗುತ್ತಾರೆ ಅಷ್ಟೇ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹುಬ್ಬಳ್ಳಿ ಭೇಟಿ ಸಂದರ್ಭದಲ್ಲಿ ಒಳ್ಳೆಯ ಹಾಗೂ ಸಭ್ಯ ಮುಖ್ಯಮಂತ್ರಿ ಎಂದು ಬೊಮ್ಮಾಯಿ ಅವರನ್ನು ಹೊಗಳಿದ್ದಾರೆ. ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಆಡಳಿತ ಉತ್ತಮವಾಗಿ ಸಾಗಿದೆ’ ಎಂದರು.