ನವಲಗುಂದ: ಪಟ್ಟಣದ ಗಾಂಧಿ ಮಾರುಕಟ್ಟೆಯ ಬಳಿಯ ಅಕ್ಕಿ ಓಣಿಯ ಎರಡು ಮನೆಗಳಲ್ಲಿ ಸೋಮವಾರ ಕಳವು ನಡೆದಿದೆ. ಮನೆಯ ಮಾಲೀಕರಾದ ಬಸವರಾಜ ಕಮತರ ಹಾಗೂ ನಿಂಗಪ್ಪ ಕಮತರ ಎಂಬುವರ ಮನೆಯಲ್ಲಿ ಇಲ್ಲದ ಸಮಯದಲ್ಲಿ ಹಗಲಲ್ಲೇ ಮನೆಯೊಳಗೆ ನುಗ್ಗಿರುವ ಕಳ್ಳರು ₹15 ಸಾವಿರ ನಗದು ಹಾಗೂ ಆಭರಣ ಕಳವು ಮಾಡಿದ್ದಾರೆ. ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.