ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪನೆ ವಾರ್ಷಿಕೋತ್ಸವ

Last Updated 24 ಫೆಬ್ರುವರಿ 2023, 3:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಸಿಬಿಟಿ ಕಿಲ್ಲೆಯಲ್ಲಿರುವ ಸಾಯಿ ಪ್ರಶಾಂತಿ ಮಂದಿರದ ಶಿರಡಿ ಸಾಯಿಬಾಬಾ ಮೂರ್ತಿ ಪ್ರತಿಷ್ಠಾಪನೆಯ 16ನೇ ವಾರ್ಷಿಕೋತ್ಸವ ಸಮಾರಂಭವು ಬುಧವಾರ ನಡೆಯಿತು.

ಬೆಳಿಗ್ಗೆ 5 ಗಂಟೆಗೆ ಸಾಯಿಬಾಬಾ ಮೂರ್ತಿಗೆ ಕಾಕಡಾರತಿ, ರುದ್ರಾಭಿಷೇಕ, ಮಂಗಲಸ್ನಾನ, ಅಲಂಕಾರ, ಪೂಜೆ, ಬೆಳ್ಳಿ ಪಾದುಕೆಗಳ ದಿವ್ಯ ದರ್ಶನ ಜರುಗಿತು. 8ರಿಂದ 10ಗಂಟೆಯವರೆಗೆ ಗಣಹೋಮ ಹಾಗೂ ಪೂರ್ಣಾಹುತಿ ನಡೆಯಿತು. ನಂತರ, ವೇದಿಕೆ ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಮಧ್ಯಾಹ್ನ 12ಗಂಟೆಗೆ ಮಹಾಮಂಗಳಾರತಿ ನೆರವೇರಿದ ಬಳಿಕ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಾಯಿ ಭಕ್ತ ಮಂಡಳದ ಅಧ್ಯಕ್ಷ ಎಂ. ಸೋಮರೆಡ್ಡಿ, ಉಪಾಧ್ಯಕ್ಷ ರಾಜಕುಮಾರ ಎಸ್. ಮಹಾಜನ, ಗೌರವ ಕಾರ್ಯದರ್ಶಿ ಅಮೀತ ವಿಜಯ ಮಹಾಜನ, ಕೋಶಾಧ್ಯಕ್ಷ ಬಸವರಾಜ ಜಿ. ಕಳ್ಳಿಮಠ, ನಿರ್ದೇಶಕರಾದ ಸಿದ್ರಾಮ ಎನ್. ಮೇತ್ರೆ, ರಿತೇಶ್ ಎಮ್. ಅಗರ್ವಾಲ, ವಿನೋದ ವಿ. ಜಾಧವ, ನಂದಾ ಬ. ಕಳ್ಳಿಮಠ, ಸಾವಿತ್ರಿಬಾಯಿ ಎ. ರಾಯ್ಕರ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT