ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಶಿ, ಮೋದಿ ಗೆಲುವಿಗೆ ಚಂಡಿಕಾಹೋಮ

Last Updated 18 ಏಪ್ರಿಲ್ 2019, 13:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ಧಾರವಾಡ ಕ್ಷೇತ್ರದಲ್ಲಿ ಪ್ರಹ್ಲಾದ ಜೋಶಿ ಮತ್ತೆ ಗೆಲ್ಲಬೇಕು ಎಂದು ಪ್ರಾರ್ಥಿಸಿ ನರೇಂದ್ರ ಮೋದಿ ಅಭಿಮಾನಿ ಬಳಗ ಹಾಗೂ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ವತಿಯಿಂದ ಗುರುವಾರ ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಚಂಡಿಕಾಯಾಗ ನಡೆಯಿತು.

ಸುಭ್ರಮಣ್ಯ ಭಟ್ ಮತ್ತು 8 ಜನ ಋತಿಜ್ವರು ಯಾಗ ನಡೆಸಿಕೊಟ್ಟರು. ಕಲ್ಯಾಣಮಂಟಪಕ್ಕೆ ಭೇಟಿ ನೀಡಿದ ಪ್ರಹ್ಲಾದ ಜೋಶಿ ಗೆಲುವಿನ ಸಂಕಲ್ಪ ಮಾಡಿದರು.

ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀಪತಿ ಓಕುಡೆ, ಕಾರ್ಯದರ್ಶಿ ಅನಂತರಾಜ ಭಟ್, ಪದಾಧಿಕಾರಿಗಳಾದ ಕೃಷ್ಣರಾಜ ಕೆಮ್ತೂರು, ಅನಂತ ಪದ್ಮನಾಭ ಐತಾಳ, ಮನೋಹರ ಪರ್ವತಿ, ರಮೇಶ ಶೆಟ್ಟಿ, ಗೋವಿಂದ ಜೋಶಿ. ಕೃಷ್ಣ ಉಚ್ಚಿಲ, ಶ್ರೀನಿವಾಸ ಪೇಜಾವರ, ಧಾರವಾಡ ಜಿಲ್ಲಾ ಬ್ರಾಹ್ಮಣರ ಸೇವಾಸಂಘದ ಅಧ್ಯಕ್ಷ ಎಂ.ಬಿ. ನಾಥು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT