ಬೇರೆ ಕಾರಣವಿರುವ ಅನುಮಾನ: ಇಷ್ಟು ದಿನ ಪೊಲೀಸರ ವಶದಲ್ಲಿದ್ದ ಆರೋಪಿಗಳು ಕೊಲೆಗೆ ಬೇನಾಮಿ ಆಸ್ತಿಯೇ ಕಾರಣ ಎಂಬ ವಿಷಯವನ್ನು ಬಿಟ್ಟರೆ, ಮತ್ತೇನನ್ನೂ ಬಾಯ್ಬಿಟ್ಟಿಲ್ಲ. ಆದರೆ, ಗುರೂಜಿಗೆ ಒಂದು ಕಾಲದಲ್ಲಿ ತೀರಾ ಆಪ್ತರಾಗಿದ್ದವರು, ಅಷ್ಟೊಂದು ಬರ್ಬರವಾಗಿ ಕೊಲೆ ಮಾಡಿರುವುದರ ಹಿಂದೆ ಇತರ ಕಾರಣಗಳಿರುವ ಅನುಮಾನಗಳಿವೆ. ಹೀಗಾಗಿ ಬೇರೆ ಆಯಾಮಗಳಿಂದಲೂ ವಿಚಾರಣೆಗೆ ಒಳಪಡಿಸಿದರೆ ಮತ್ತಷ್ಟು ವಿಷಯಗಳು ಹೊರಕ್ಕೆ ಬರುವ ಸಾಧ್ಯತೆ ಇರುವ ಕಾರಣ ಇಬ್ಬರನ್ನೂ ಮತ್ತೆ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.