‘ಬಾಬಾ ಸೇರಿದಂತೆ ಸೋಯಬ್, ಮಂಗಲ್ ಯಾಸಿನ್, ಇಕ್ಬಾಲ್ ಯಾಸಿನ್, ಫಯಾಜ್ ಹತ್ತಿ ಮತ್ತು ಅಪ್ಪು ಎಂಬುವರ ವಿರುದ್ಧ ದೂರು ದಾಖಲಾಗಿದೆ. ಬಾಬಾ ವಿರುದ್ಧ ಕೊಲೆಯತ್ನದ ಆರೋಪವಿತ್ತು. ಕಸಬಾ ಠಾಣೆಯಲ್ಲಿ ದೂರು ಬಂದಾಗ ‘ಸಾಧಾರಣ ಭಯ’ ಎಂದು ಅಲ್ಲಿಯ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದರು. ಆಗಲೇ ಅವನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಇಂತಹ ಪ್ರಕರಣ ಮರುಕಳಿಸುತ್ತಿರಲಿಲ್ಲ’ ಎಂದರು.