ಧಾರವಾಡ ಕಾರ್ಯನಿರತ ಪತ್ರಕರ್ತರ ಸಂಘ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಪ್ಪನ್ನು ತಪ್ಪೆಂದು ಬರೆಯಿರಿ. ಪತ್ರಕರ್ತರು ಮನಸ್ಸು ಮಾಡಿದರೆ ರಾಜಕಾರಣ, ಪ್ರಜಾಪ್ರಭುತ್ವದಲ್ಲಿ ಸುಧಾರಣೆ ತರಬಹುದು. ನೀವು ಕೊಳೆ ತೊಳೆಯುತ್ತೀರಿ. ನಾವು ಕೊಳೆ ಹೆಚ್ಚು ಮಾಡುತ್ತೇವೆ ಎಂದು ವಿಮರ್ಶಿಸಿದರು.