‘ರಾಜ್ಯ ಸರ್ಕಾರವು ಇಂತಹ ಗುಂಡಾದಾಳಿಯನ್ನು ನಿಗ್ರಹಿಸಲಾಗದಷ್ಟು ದುರ್ಬಲವಾಗಿದೆ. ಆರ್ಎಸ್ಎಸ್ ನಿಯಂತ್ರಣಕ್ಕೆ ಸಿಲುಕಿರುವುದರಿಂದ ಮತಾಂಧ ಗುಂಡಾಗಳು ಬಹಿರಂಗ ದಾಳಿಗೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾನೂನು ಸುವ್ಯವಸ್ಥೆ ಬಲಗೊಳಿಸಬೇಕು. ಇಲ್ಲವಾದರೆ ರಾಜೀನಾಮೆ ನೀಡಿ, ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಬೇಕು’ ಎಂದು ಸವಾಲು ಹಾಕಿದ್ದಾರೆ.