ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟಾಲೆಂಟ್ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 300 ರನ್ ಕಲೆಹಾಕಿತು. ಅನುಕೃತ್ ಜಿ. (57), ಸಂಜಯ್ ಎಸ್.ಎಂ. (79) ಅರ್ಧಶತಕಗಳು ಇದಕ್ಕೆ ಕಾರಣವಾದವು. ಎದುರಾಳಿ ಗದುಗಿನ ಜನೋಪಂಥರ ಕ್ರಿಕೆಟ್ ಅಕಾಡೆಮಿ 32.1 ಓವರ್ಗಳಲ್ಲಿ 166 ರನ್ ಕಲೆಹಾಕಿತು. ಶ್ರವಣ ಟಿ. ಮತ್ತು ಭಾರ್ಗವ ನಾಡಿಗೇರ ತಲಾ ಮೂರು ವಿಕೆಟ್ಗಳನ್ನು ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.