‘ನೈರುತ್ಯ ರೈಲ್ವೆ ವಲಯದಲ್ಲಿ ಡಿ ವರ್ಗದ ನೌಕರನಾಗಿ ಕೆಲಸ ಮಾಡಿದ್ದೆ. ಹೆಂಡತಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾಳೆ. ಹಿರಿಯ ಮಗ ಓಂಕಾರ ಶಿವಮೊಗ್ಗದ ಕಿಮ್ಸ್ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿ, ಮೆರಿಟ್ ಆಧಾರದ ಮೇಲೆ ರೋಹ್ಟಕ್ನ ಪಿಎಂಐಎಸ್ ಕಾಲೇಜಿನಲ್ಲಿ ಎಸ್ಟಿ ಕೋಟಾದಡಿ ಎಂಡಿ ಓದುತ್ತಿದ್ದನು. ಆರು ತಿಂಗಳಲ್ಲಿ ಎಂ.ಡಿ ಮುಗಿಯುತ್ತಿತ್ತು. ಆದರೆ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥೆ ಗೀತಾ ಗಟವಾಳ ಅವರು, ಎಸ್ಟಿ ಸಮುದಾಯದವನು ಎಂದು ಎರಡು ವರ್ಷಗಳ ಕಾಲ ಕಿರುಕುಳ ನೀಡಿದ್ದಾರೆ. ಆತ ಮಂಡಿಸಿದ ಪ್ರಬಂಧವನ್ನು 20 ಬಾರಿ ತಿರಸ್ಕರಿಸಿ, ಮಾನಸಿಕ ಹಿಂಸೆ ನೀಡಿದ್ದಾರೆ. ಆದರೂ, ಆತನ ಪ್ರಬಂಧಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ನೊಂದು ಆತ ಜೂನ್ 13ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಪ್ರಧಾನಿ ಅವರಿಗೆ ಕಳುಹಿಸಿದ ಮೇಲ್ನಲ್ಲಿ ಉಲ್ಲೇಖಿಸಿದ್ದಾರೆ.