‘ಸ್ಥಳೀಯರು ನೀಡಿದ ದೂರಿನ ಮೇರೆಗೆ ಪಾಲಿಕೆಯವರು ಹ್ಯಾಂಡ್ ಪಂಪ್ ಬಿಚ್ಚಿಕೊಂಡು ದುರಸ್ತಿಗೆ ಕೊಂಡೊಯ್ದರು. ಹೋಗುವಾಗ ಕೊಳವೆ ಬಾವಿಗೆ ಪ್ಲಾಸ್ಟಿಕ್ ಚೀಲ ಕಟ್ಟಿ, ಮೇಲ್ಭಾಗದಿಂದ ಕಲ್ಲನ್ನು ಇಟ್ಟಿದ್ದರು. ಆದರೆ, ಆರು ತಿಂಗಳಾದರೂ ಹ್ಯಾಂಡ್ ಪಂಪ್ ತಂದು ಮತ್ತೆ ಅಳವಡಿಸಲಿಲ್ಲ. ಇತ್ತೀಚೆಗೆ ಸುರಿದ ಗಾಳಿ, ಮಳೆಯಿಂದ ಬಾವಿಗೆ ಕಟ್ಟಿದ್ದ ಪ್ಲಾಸ್ಟಿಕ್ ಹರಿದು, ಕಲ್ಲು ಪಕ್ಕಕ್ಕೆ ಸರಿದಿದೆ’ ಎಂದು ಜೆ.ಸಿ. ನಗರ ನಿವಾಸಿಗಳ ಸಂಘದ ಕಾರ್ಯದರ್ಶಿ ಮಹೇಶ ಪತ್ತಾರ ‘ಪ್ರಜಾವಾಣಿ’ಗೆ ತಿಳಿಸಿದರು.