ಕಿಮ್ಸ್ ವೃತ್ತದ ಗಾಂಧೀಜಿ ಪ್ರತಿಮೆಯ ಎದುರಿಗೊಂದು, ಅಲ್ಲಿಂದ ಆಚೆ ಬಲಭಾಗ ದಲ್ಲಿ ಇರುವ ಹನುಮನ ಗುಡಿಗೆ ಮೊದಲು, ದಾಟಿದ ನಂತರ ಒಂದು... ಹೀಗೆ ಮೂರು ಗುಂಡಿಗಳು ಬಾಯ್ದೆರೆದುಕೊಂಡು ದಾರಿ ಹೋಕರಿಗೆ ಅಪಾಯವನ್ನು ಆಹ್ವಾನಿಸುತ್ತಿವೆ. ಗುಂಡಿಗಳನ್ನು ಕಾಟಾಚಾರಕ್ಕೆ ಮುಚ್ಚಲಾದ ಡ್ರೈನೇಜ್ ಮುಚ್ಚುಳ, ಕಲ್ಲಿನ ಹಲಗೆಗಳು ಕಾಲಿಗೆ ಎಡತಾಕಿದರೂ ಮುಗ್ಗರಿಸುವುದು ತಪ್ಪಿದ್ದಲ್ಲ.