‘ಕಾಂಗ್ರೆಸ್ ಮುಕ್ತ ಭಾರತ, ಬಿಜೆಪಿ ಮುಕ್ತ ಭಾರತ ನಮಗೆ ಬೇಕಿಲ್ಲ. ಅಮಾನವೀಯ ನಡವಳಿಕೆ, ಕೆಟ್ಟ ಆಲೋಚನೆ ಮುಕ್ತ ಭಾರತ ನಮ್ಮ ಕನಸು. ಅಮಿತ್ ಶಾ ಭಾಷೆ ಬದಲಾಗಬೇಕು. ಮನುಷ್ಯರನ್ನು ಪ್ರಾಣಿಗಳಿಗೆ ಹೋಲಿಸಿ ಮಾತನಾಡುವುದು ತರವಲ್ಲ. ನಾಯಿ, ಹಾವು ಇನ್ನಿತರ ಪ್ರಾಣಿಗಳಿಗೆ ವಿರೋಧಿಗಳನ್ನು ಹೋಲಿಸಿದ್ದ ಅಮಿತ್ ಶಾ, ರಾಜ್ಯಕ್ಕೇನು ಪುಂಗಿ ಊದಲು ಬರುತ್ತಿದ್ದಾರಾ’ ಎಂದು ರೈ ಪ್ರಶ್ನಿಸಿದರು.