‘ಹುಬ್ಬಳ್ಳಿಯಿಂದ ಬಾಗಲಕೋಟೆ ಹಾಗೂ ವಿಜಯಪುರಕ್ಕೆ 15, ಗದುಗಿಗೆ 11 ಮತ್ತು ಬೆಳಗಾವಿಯಿಂದ ಅಥಣಿ ಮತ್ತು ವಿಜಯಪುರಕ್ಕೆ 15 ಖಾಸಗಿ ಬಸ್ಗಳಿಗೆ ಸರ್ಕಾರ ಪರ್ಮಿಟ್ ನೀಡಿದೆ. ರಾಜ್ಯದಲ್ಲಿ ಕೆಎಸ್ಆರ್ಟಿಸಿಯನ್ನೇ ನಂಬಿಕೊಂಡು 1.3 ಲಕ್ಷ ಸಿಬ್ಬಂದಿ ಇದ್ದಾರೆ. ಕೋವಿಡ್ ಕಾರಣದಿಂದಾಗಿ ಅವರಿಗೂ ಪೂರ್ಣ ವೇತನ ಸೇರಿದಂತೆ ಇನ್ನಿತರ ಸೌಲಭ್ಯಗಳು ಸಿಗುತ್ತಿಲ್ಲ. ಖಾಸಗಿಗೆ ಪರ್ಮಿಟ್ ನೀಡುವುದನ್ನು ಮುಂದುವರಿಸಿದರೆ ಸಾರಿಗೆ ನಿಗಮಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದರು.