‘ಕಳೆದ ವಾರ ಸುರಿದ ಭಾರೀ ಮಳೆಯ ವೇಳೆ ಕಟ್ಟಡ ಶಿಥಿಲಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಅಂಗಡಿಗಳನ್ನು ತಕ್ಷಣ ತೆರವುಗೊಳಿಸಲು ಸೂಚನೆ ನೀಡಿದ್ದರು. ಅಂಗಡಿಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಸ್ಥಳಾಂತರಿಸಲು ಸಹ ಅವಕಾಶ ನೀಡಿಲ್ಲ. ಇದರಿಂದ ಖುರ್ಚಿ, ಫ್ಯಾನ್, ಕಟ್ಟಿಗೆ ಉಪಕರಣಗಳು ಸೇರಿದಂತೆ ಅನೇಕ ಸಾಮಗ್ರಿಗಳು ತೆರವು ಕಾರ್ಯಾಚರಣೆ ವೇಳೆ ನಷ್ಟವಾಗಿವೆ’ ಎಂದು ಅಲ್ಲಿ ಬಾಡಿಗೆ ಇದ್ದ ವ್ಯಾಪಾರಸ್ಥ ಪ್ರಕಾಶ ಬುರಬುರೆ ಹೇಳಿದರು.