<p>ಧಾರವಾಡ: ‘ಜನಪದ ಗರತಿ ಹಾಡುಗಳಲ್ಲಿ ಮಹಿಳೆಯರ ಹುಟ್ಟಿನಿಂದ ಸಾಯುವವರೆಗಿನ ಬದುಕಿನ ಚಿತ್ರಣ ಕಾಣಬಹುದು’ ಎಂದು ಲೇಖಕಿ ಶರಣಮ್ಮ ಗೋರೆಬಾಳ ಹೇಳಿದರು.</p>.<p>ಹುಬ್ಬಳ್ಳಿಯ ಗುರು ಸಿದ್ಧೇಶ್ವರ ಕೋ ಆಪರೇಟಿವ್ ಬ್ಯಾಂಕ್, ಸುದರ್ಶನ್ ರಾಜ ಫೌಂಡೇಷನ್, ಗುರಪ್ಪ ಮತ್ತು ಗೌರಮ್ಮ ಬೆಲ್ಲದ ದತ್ತಿ, ಜಿ.ಎಸ್.ಪಾಟೀಲ, ಪ್ರೇಮಾ ನಾಗೇಶ್ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ತವರು ಮನೆಯಲ್ಲಿ ಹೆಣ್ಣಿನ ಜೀವನ ಗಂಡನ ಮನೆಯಲ್ಲಿಯ ಜೀವನ ಕೌಟುಂಬಿಕ ಬದುಕಿನಲ್ಲಿ ಎದುರಾಗುವ ಸವಾಲುಗಳು, ಸಮಸ್ಯೆಗಳು ಸಮಾಜದ ರೀತಿ ನೀತಿಗಳು ಎಲ್ಲವೂ ಈ ಹಾಡುಗಳಲ್ಲಿ ಇರುತ್ತವೆ. ಈ ಹಾಡುಗಳು ಬದಕಿನ ಕನ್ನಡಿ’ ಎಂದು ಹೇಳಿದರು.</p>.<p>ಶಿಕ್ಷಣಾಧಿಕಾರಿ ಸುಜಾತಾ ತಿಮ್ಮಾಪುರ ಮಾತನಾಡಿ, ‘ಜನಪದ ಸಾಹಿತ್ಯ ಬದುಕಿನ ಮೌಲ್ಯಗಳನ್ನು ತಿಳಿಸುತ್ತದೆ. ಜನಪದ ಸಾಹಿತ್ಯವನ್ನು ಅಧ್ಯಯನ ಮಾಡಬೇಕು’ ಎಂದರು.</p>.<p>ಎಫ್.ಬಿ.ಕಣವಿ, ಚಂದ್ರಶೇಖರ ಕೆಂಗಾರ, ರಾಜಶೇಖರ ಬಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಎಸ್ ಕೌಜಲಗಿ, ಚಂದ್ರಶೇಖರ ರೊಟ್ಟಿಗವಾಡ, ಮಹಾಂತೇಶ ನರೇಗಲ್, ಎಸ್.ಎಸ್ ದೊಡಮನಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-24-1279859389</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ‘ಜನಪದ ಗರತಿ ಹಾಡುಗಳಲ್ಲಿ ಮಹಿಳೆಯರ ಹುಟ್ಟಿನಿಂದ ಸಾಯುವವರೆಗಿನ ಬದುಕಿನ ಚಿತ್ರಣ ಕಾಣಬಹುದು’ ಎಂದು ಲೇಖಕಿ ಶರಣಮ್ಮ ಗೋರೆಬಾಳ ಹೇಳಿದರು.</p>.<p>ಹುಬ್ಬಳ್ಳಿಯ ಗುರು ಸಿದ್ಧೇಶ್ವರ ಕೋ ಆಪರೇಟಿವ್ ಬ್ಯಾಂಕ್, ಸುದರ್ಶನ್ ರಾಜ ಫೌಂಡೇಷನ್, ಗುರಪ್ಪ ಮತ್ತು ಗೌರಮ್ಮ ಬೆಲ್ಲದ ದತ್ತಿ, ಜಿ.ಎಸ್.ಪಾಟೀಲ, ಪ್ರೇಮಾ ನಾಗೇಶ್ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ತವರು ಮನೆಯಲ್ಲಿ ಹೆಣ್ಣಿನ ಜೀವನ ಗಂಡನ ಮನೆಯಲ್ಲಿಯ ಜೀವನ ಕೌಟುಂಬಿಕ ಬದುಕಿನಲ್ಲಿ ಎದುರಾಗುವ ಸವಾಲುಗಳು, ಸಮಸ್ಯೆಗಳು ಸಮಾಜದ ರೀತಿ ನೀತಿಗಳು ಎಲ್ಲವೂ ಈ ಹಾಡುಗಳಲ್ಲಿ ಇರುತ್ತವೆ. ಈ ಹಾಡುಗಳು ಬದಕಿನ ಕನ್ನಡಿ’ ಎಂದು ಹೇಳಿದರು.</p>.<p>ಶಿಕ್ಷಣಾಧಿಕಾರಿ ಸುಜಾತಾ ತಿಮ್ಮಾಪುರ ಮಾತನಾಡಿ, ‘ಜನಪದ ಸಾಹಿತ್ಯ ಬದುಕಿನ ಮೌಲ್ಯಗಳನ್ನು ತಿಳಿಸುತ್ತದೆ. ಜನಪದ ಸಾಹಿತ್ಯವನ್ನು ಅಧ್ಯಯನ ಮಾಡಬೇಕು’ ಎಂದರು.</p>.<p>ಎಫ್.ಬಿ.ಕಣವಿ, ಚಂದ್ರಶೇಖರ ಕೆಂಗಾರ, ರಾಜಶೇಖರ ಬಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಎಸ್ ಕೌಜಲಗಿ, ಚಂದ್ರಶೇಖರ ರೊಟ್ಟಿಗವಾಡ, ಮಹಾಂತೇಶ ನರೇಗಲ್, ಎಸ್.ಎಸ್ ದೊಡಮನಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-24-1279859389</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>