<p>ಧಾರವಾಡ: ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದೇವಿಯರ (ದ್ಯಾಮವ್ವ, ದುರ್ಗವ್ವ) ಜಾತ್ರೆ ಅಂಗವಾಗಿ ಶುಕ್ರವಾರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.</p>.<p>ಪುಷ್ಪಾಲಂಕೃತ ಭವ್ಯ ರಥದಲ್ಲಿ ದ್ಯಾಮವ್ವ, ದುರ್ಗವ್ವ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಮಧ್ಯಾಹ್ನ 4.50ಕ್ಕರ ಪೂಜೆ ಸಲ್ಲಿಸಲಾಯಿತು. ಬೆಂಗಳೂರಿನ ಗವೀಪುರಂ ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಸಹಿತ ವಿವಿಧ ಮಠಾಧೀಶರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.</p>.<p>ಭಕ್ತರು ’ದ್ಯಾಮವ್ವ, ದುರ್ಗವ್ವ ಉದೋ..ಉದೋ...’, 'ಗ್ರಾಮದೇವತೆಯರಿಗೆ ಜಯವಾಗಲಿ' ಘೋಷಣೆಗಳನ್ನು ಮೊಳಗಿಸಿದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು,ಹೂವು, ಲಿಂಬೆ ಹಣ್ಣು ತೂರಿ ಭಕ್ತಿ ಸಮರ್ಪಿದರು. ಭಜನೆ, ಗೊಂಬೆ ಕುಣಿತ, ಜಗ್ಗಲಗಿ,ಡೊಳ್ಳು ಮೇಳ ಸಹಿತ ಹಲವು ಜನಪದ ಕಲಾತಂಡಗಳ ವಾದ್ಯ ಮೇಳಗಳು ಮೆರಗು ನೀಡಿದವು.</p>.<p>ಶಿವಪೂರ, ಕಣವಿಹೂಲಿಕಟ್ಟಿ,ಬಣದೂರ, ದ್ಯಾಮನಕೊಪ್ಪ, ಕರ್ಲಕೊಪ್ಪ, ಹಸರಂಬಿ, ಅರೆಬಸವನಕೊಪ್ಪ, ಗುಳುನಕೊಪ್ಪ, ಗಂಭ್ಯಾಪೂರ, ಡೊಂಬರಿಕೊಪ್ಪ, ಕಳಸನಕೊಪ್ಪ, ಬಿ-ಬಸವನಕೊಪ್ಪ, ಹೊತ್ತಿಕೋಟಿ, ಹಳ್ಳಿಗೇರಿ, ಅಂಡ್ಲಿಕೊಪ್ಪ, ಮಾವಿನಕೊಪ್ಪ, ಮುರ್ಕವಾಡ, ಅಂಗನಕೊಪ್ಪ, ಮುಂಡವಾಡ, ಮಾರಡಗಿ ಸಹಿತ ಸುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತರು ತೇರನ್ನು ಎಳೆದು ಸಂಭ್ರಮಿಸಿದರು.</p>.<p>ದೇವಸ್ಥಾನದ ಬಳಿಯಿಂದ ಹೊರಟ ತೇರು ಆರಿಗೇರಿಯ ಶಿವಾಜಿ ವೃತ್ತದವರೆಗೆ ಸಾಗಿ ಮರಳಿ ವಿರಕ್ತ ಮಠದ ಚೌವತ್ರಿ ಮನೆ ತಲುಪಿ ಸಂಪನ್ನಗೊಂಡಿತು. ರಥೋತ್ಸವ ಸಮಯದಲ್ಲಿ ಅರ್ಧ ಗಂಟೆ ಮಳೆ ಸುರಿಯಿತು.</p>.<p>ಕಲಘಟಗಿಯ ರೇವಣ್ಣಸಿದ್ದೇಶ್ವರ ಸ್ವಾಮೀಜಿ, ರಾಯನಾಳಅಭಿನವ ರೇವಣ ಸಿದ್ದೇಶ್ವರ ಸ್ವಾಮೀಜಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-24-2095169932</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದೇವಿಯರ (ದ್ಯಾಮವ್ವ, ದುರ್ಗವ್ವ) ಜಾತ್ರೆ ಅಂಗವಾಗಿ ಶುಕ್ರವಾರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.</p>.<p>ಪುಷ್ಪಾಲಂಕೃತ ಭವ್ಯ ರಥದಲ್ಲಿ ದ್ಯಾಮವ್ವ, ದುರ್ಗವ್ವ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಮಧ್ಯಾಹ್ನ 4.50ಕ್ಕರ ಪೂಜೆ ಸಲ್ಲಿಸಲಾಯಿತು. ಬೆಂಗಳೂರಿನ ಗವೀಪುರಂ ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಸಹಿತ ವಿವಿಧ ಮಠಾಧೀಶರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.</p>.<p>ಭಕ್ತರು ’ದ್ಯಾಮವ್ವ, ದುರ್ಗವ್ವ ಉದೋ..ಉದೋ...’, 'ಗ್ರಾಮದೇವತೆಯರಿಗೆ ಜಯವಾಗಲಿ' ಘೋಷಣೆಗಳನ್ನು ಮೊಳಗಿಸಿದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು,ಹೂವು, ಲಿಂಬೆ ಹಣ್ಣು ತೂರಿ ಭಕ್ತಿ ಸಮರ್ಪಿದರು. ಭಜನೆ, ಗೊಂಬೆ ಕುಣಿತ, ಜಗ್ಗಲಗಿ,ಡೊಳ್ಳು ಮೇಳ ಸಹಿತ ಹಲವು ಜನಪದ ಕಲಾತಂಡಗಳ ವಾದ್ಯ ಮೇಳಗಳು ಮೆರಗು ನೀಡಿದವು.</p>.<p>ಶಿವಪೂರ, ಕಣವಿಹೂಲಿಕಟ್ಟಿ,ಬಣದೂರ, ದ್ಯಾಮನಕೊಪ್ಪ, ಕರ್ಲಕೊಪ್ಪ, ಹಸರಂಬಿ, ಅರೆಬಸವನಕೊಪ್ಪ, ಗುಳುನಕೊಪ್ಪ, ಗಂಭ್ಯಾಪೂರ, ಡೊಂಬರಿಕೊಪ್ಪ, ಕಳಸನಕೊಪ್ಪ, ಬಿ-ಬಸವನಕೊಪ್ಪ, ಹೊತ್ತಿಕೋಟಿ, ಹಳ್ಳಿಗೇರಿ, ಅಂಡ್ಲಿಕೊಪ್ಪ, ಮಾವಿನಕೊಪ್ಪ, ಮುರ್ಕವಾಡ, ಅಂಗನಕೊಪ್ಪ, ಮುಂಡವಾಡ, ಮಾರಡಗಿ ಸಹಿತ ಸುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತರು ತೇರನ್ನು ಎಳೆದು ಸಂಭ್ರಮಿಸಿದರು.</p>.<p>ದೇವಸ್ಥಾನದ ಬಳಿಯಿಂದ ಹೊರಟ ತೇರು ಆರಿಗೇರಿಯ ಶಿವಾಜಿ ವೃತ್ತದವರೆಗೆ ಸಾಗಿ ಮರಳಿ ವಿರಕ್ತ ಮಠದ ಚೌವತ್ರಿ ಮನೆ ತಲುಪಿ ಸಂಪನ್ನಗೊಂಡಿತು. ರಥೋತ್ಸವ ಸಮಯದಲ್ಲಿ ಅರ್ಧ ಗಂಟೆ ಮಳೆ ಸುರಿಯಿತು.</p>.<p>ಕಲಘಟಗಿಯ ರೇವಣ್ಣಸಿದ್ದೇಶ್ವರ ಸ್ವಾಮೀಜಿ, ರಾಯನಾಳಅಭಿನವ ರೇವಣ ಸಿದ್ದೇಶ್ವರ ಸ್ವಾಮೀಜಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-24-2095169932</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>