<p><strong>ಹುಬ್ಬಳ್ಳಿ</strong>: ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯಾಗಿ ರೂಪಾಂತರಿಸಿ ರೈತರ ಜೀವನಮಟ್ಟವನ್ನು ಉತ್ತಮಪಡಿಸಲು ‘ಕೃಷಿ ಭಾಗ್ಯ’ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ 2023-24ನೇ ಸಾಲಿನಿಂದ ಸರ್ಕಾರ ಮರು ಜಾರಿಗೊಳಿಸಿದೆ.</p>.<p>2026-27ನೇ ಸಾಲಿಗೆ ‘ಕೃಷಿ ಭಾಗ್ಯ’ ಯೋಜನೆಯನ್ನು ಸರ್ಕಾರ ಮುಂದುವರಿಸಿದೆ. ಮಳೆಗಾಲ ಹೊರತುಪಡಿಸಿ ವರ್ಷದ ಇನ್ನುಳಿದ ಅವಧಿಗೂ ನೀರಿನ ಪೂರೈಕೆಯನ್ನು ನಿರಂತರಗೊಳಿಸುವ ಉದ್ದೇಶದಿಂದ ಪ್ರಸ್ತುತ ವರ್ಷದಲ್ಲಿ ಈ ಯೋಜನೆಯಡಿ ಧಾರವಾಡ ಕೃಷಿ ಇಲಾಖೆಯು ಜಿಲ್ಲೆಯಲ್ಲಿ ಒಟ್ಟು 180 ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿ ಹೊಂದಿದೆ.</p>.<p>ಧಾರವಾಡ ಜಿಲ್ಲೆಯಲ್ಲಿ 2.61 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶ ಮಳೆಯಾಶ್ರಿತವಾಗಿದೆ. ಮಳೆ ಆಧಾರಿತ ಕೃಷಿಯನ್ನೇ ಮಾಡುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೀರಾವರಿ ಆಧಾರಿತ ಕೃಷಿ ಪ್ರದೇಶ ಕೇವಲ 0.22 ಲಕ್ಷ ಹೆಕ್ಟೇರ್ ಆಗಿದ್ದು, ಒಟ್ಟು ಕೃಷಿ ಬೆಳೆಗಳ ಕ್ಷೇತ್ರ 2.82 ಲಕ್ಷ ಹೆಕ್ಟೇರ್ ಆಗಿದೆ.</p>.<p>ಕಲಘಟಗಿಯಲ್ಲಿ ಹೆಚ್ಚು ನೀರಾವರಿ ಆಧಾರಿತ ಕೃಷಿ ಹಾಗೂ ಕುಂದಗೋಳದಲ್ಲಿ ಕಡಿಮೆ ನೀರಾವರಿ ಆಧಾರಿತ ಕೃಷಿ ಮಾಡಲಾಗುತ್ತದೆ. ಹೆಚ್ಚು ವಾಡಿಕೆ ಮಳೆ ಬೀಳುವ ತಾಲ್ಲೂಕು ಅಳ್ನಾವರ (1267.4 ಮಿ.ಮೀ.) ಹಾಗೂ ಕಡಿಮೆ ವಾಡಿಕೆ ಮಳೆ ಬೀಳುವ ತಾಲ್ಲೂಕು ನವಲಗುಂದ (630.6 ಮಿ.ಮೀ ).</p>.<p>ಜಿಲ್ಲೆಯಲ್ಲಿ ವಾರ್ಷಿಕವಾಗಿ ಸುರಿಯುವ ವಾಡಿಕೆ ಮಳೆಯ ಪೈಕಿ ಬೇಸಿಗೆಯಲ್ಲಿ 5.0 ಮಿ.ಮೀ, ಪೂರ್ವ ಮುಂಗಾರು 120.4 ಮಿ.ಮೀ, ಮುಂಗಾರು 513.9 ಮಿ.ಮೀ, ಹಿಂಗಾರು 147.8 ಮಿ.ಮೀ, ಸೇರಿದಂತೆ ಒಟ್ಟು 787.1 ಮಿ.ಮೀ, ಮಳೆಯಾಗುತ್ತದೆ.</p>.<p>ಸದ್ಯ ಪೂರ್ವ ಮುಂಗಾರು ಆರಂಭಗೊಂಡಿದ್ದು, ಈ ಮಳೆ ನೀರನ್ನು ಹರಿದುಹೋಗಲು ಬಿಡದೆ ಹೊಲದ ಒಂದು ಮೂಲೆಯಲ್ಲಿ ಹೊಂಡ ತೆಗೆದು ನೀರನ್ನು ಸಂಗ್ರಹಿಸಲು ರೈತರು ಮುಂದಾಗಿದ್ದಾರೆ. ಯೋಜನೆಯಡಿ ವಿವಿಧ ಕಾರ್ಯಗಳಿಗೆ ಸಹಾಯಧನವೂ ಸಿಗುವುದರಿಂದ ರೈತರು ಕೃಷಿ ಹೊಂಡ ನಿರ್ಮಾಣದತ್ತ ಚಿತ್ತ ಹರಿಸುತ್ತಿದ್ದು, ಕೃಷಿ ಹೊಂಡ ಯೋಜನೆಗೆ ರೈತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.</p>.<p>‘2025–26ನೇ ಸಾಲಿನಲ್ಲಿ ಧಾರವಾಡ ತಾಲ್ಲೂಕಿನಲ್ಲಿ 157, ನವಲಗುಂದದಲ್ಲಿ 95, ಕುಂದಗೋಳದಲ್ಲಿ 88, ಹುಬ್ಬಳ್ಳಿಯಲ್ಲಿ 85, ಕಲಘಟಗಿಯಲ್ಲಿ 62, ಅಣ್ಣಿಗೇರಿಯಲ್ಲಿ 55 ಹಾಗೂ ಅಳ್ನಾವರ ತಾಲ್ಲೂಕಿನಲ್ಲಿ 16 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ’ ಎಂದು ಧಾರವಾಡ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಸಹಾಯಧನ</strong></p><p>ಮಣ್ಣಿನಲ್ಲಿ ಕಪ್ಪು, ಕೆಂಪು, ಜಂಬಿಟ್ಟಿಗೆ ಮಣ್ಣು ಎಂಬ ವಿಧಗಳಿದ್ದು, ‘ಕೃಷಿ ಭಾಗ್ಯ’ ಪ್ಯಾಕೇಜ್ನಲ್ಲಿ ರೈತರು ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ –(10×10×3 / 12×12×3 / 15×15×3 / 18×18×3 / 21×21×3 ಮೀ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹಾಸು (250/420 GSM), ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಹೊಂಡದಿಂದ ನೀರು ಎತ್ತಲು ಡೀಸೆಲ್, ಪೆಟ್ರೋಲ್, ಸೌರ ಪಂಪ್ಸೆಟ್ ಅವಳಡಿಸಿಕೊಳ್ಳುವುದು, ನೀರನ್ನು ಬೆಳೆಗಳಿಗೆ ಹಾಯಿಸಲು ತುಂತುರು/ಹನಿ ನೀರಾವರಿ ವ್ಯವಸ್ಥೆ ಸೇರಿ ಒಟ್ಟು 6 ಘಟಕಗಳನ್ನು ರೈತರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ಸೂಚಿಸಿದೆ.</p><p>ಕೃಷಿ ಹೊಂಡ ನಿರ್ಮಾಣ ಹಾಗೂ ಪಾಲಿಥೀನ್ ಶೀಟ್ ಖರೀದಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ 80ರಷ್ಟು, ಪರಿಶಿಷ್ಟ ವರ್ಗದ ರೈತರಿಗೆ ಶೇ 90ಷ್ಟು ಸಹಾಯಧನ ನಿಗದಿಪಡಿಸಿದೆ. ಕ್ಷೇತ್ರ ಬದು ನಿರ್ಮಾಣಕ್ಕೆ ಸಾಮಾನ್ಯ ವರ್ಗದ ರೈತರಿಗೆ ಶೇ80 ರಷ್ಟು ಹಾಗೂ ಪರಿಶಿಷ್ಟ ವರ್ಗದ ರೈತರಿಗೆ ಶೇ 90ರಷ್ಟು, ಕೃಷಿ ಹೊಂಡದ ಸುತ್ತ ರಕ್ಷಣೆಗಾಗಿ ಬೇಲಿ ನಿರ್ಮಾಣವನ್ನು ಕಡ್ಡಾಯಗೊಳಿಸಿ, ಇದಕ್ಕಾಗಿ ಸಾ.ವರ್ಗಕ್ಕೆ ಶೇ 40 ಮತ್ತು ಪ. ವರ್ಗಕ್ಕೆ ಶೇ 50ರಷ್ಟು ಸಹಾಯಧನ ನೀಡುತ್ತಿದೆ. ಹೊಂಡದಿಂದ ನೀರು ಎತ್ತಲು ಪಂಪ್ಸೆಟ್ (10 ಎಚ್.ಪಿವರೆಗೆ) ಸಾ. ವರ್ಗಕ್ಕೆ ಶೇ 80, ಪ. ವರ್ಗಕ್ಕೆ ಶೇ90 ಬೆಳೆಗಳಿಗೆ ನೀರು ಹಾಯಿಸಲು ನೀರಾವರಿ ಸೌಕರ್ಯಕ್ಕೆ ಸಾ. ವರ್ಗಕ್ಕೆ ಶೇ 90, ಪ. ವರ್ಗಕ್ಕೆ ಶೇ 90 ಸಹಾಯಧನ ನೀಡುತ್ತಿದೆ. </p>.<div><blockquote>ಇಲಾಖೆ ನಿಯಮಾನುಸಾರವೇ ರೈತರು ಕೃಷಿ ಹೊಂಡಗಳನ್ನು ನಿರ್ಮಿಸಬೇಕು. ಐದು ವರ್ಷಗಳ ಅವಧಿಯಲ್ಲಿ ಕೃಷಿ ಹೊಂಡದಲ್ಲಿ ಜನ, ಜಾನುವಾರು ಬಿದ್ದು ಮೃತಪಟ್ಟ ಯಾವುದೇ ಘಟನೆಗಳು ವರದಿಯಾಗಿಲ್ಲ. </blockquote><span class="attribution">– ಮಂಜುನಾಥ ಅಂತರವಳ್ಳಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಧಾರವಾಡ</span></div>.<div><blockquote>ಕೃಷಿ ಇಲಾಖೆ ಸಹಾಯಧನದಲ್ಲಿ 100 ಅಡಿ ಉದ್ದ, 100 ಅಡಿ ಅಗಲ ಹಾಗೂ 10 ಅಡಿ ಆಳದ ಕೃಷಿಹೊಂಡ ನಿರ್ಮಿಸಿಕೊಂಡಿದ್ದು, ಹೊಂಡದ ಸುತ್ತ ತಂತಿಬೇಲಿ ಹಾಕಲಾಗಿದೆ </blockquote><span class="attribution">– ಗಂಗಪ್ಪ ಕಾಲವಾಡ, ರೈತ, ಮೊರಬ ಗ್ರಾಮ, ನವಲಗುಂದ</span></div>.<div><blockquote>ನಮ್ಮದು 3 ಎಕರೆ ಕೃಷಿ ಭೂಮಿ ಇದ್ದು, ಮಾವು, ಕಬ್ಬು, ಗೋವಿನಜೋಳ ಬೆಳೆಯುತ್ತೇವೆ. ಬೋರ್ವೆಲ್ ನೀರನ್ನು ಹೊಂಡದಲ್ಲಿ ತುಂಬಿ ಇಟ್ಟುಕೊಂಡು ಅಗತ್ಯ ಬಿದ್ದಾಗ ಬಳಸುತ್ತೇವೆ </blockquote><span class="attribution">– ರುದ್ರಪ್ಪ ಗಣಪತಿ ಮಟಗೇರ್, ರೈತ, ಕೋಗಿಲಗೇರಿ ಗ್ರಾಮ, ಅಳ್ನಾವರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯಾಗಿ ರೂಪಾಂತರಿಸಿ ರೈತರ ಜೀವನಮಟ್ಟವನ್ನು ಉತ್ತಮಪಡಿಸಲು ‘ಕೃಷಿ ಭಾಗ್ಯ’ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ 2023-24ನೇ ಸಾಲಿನಿಂದ ಸರ್ಕಾರ ಮರು ಜಾರಿಗೊಳಿಸಿದೆ.</p>.<p>2026-27ನೇ ಸಾಲಿಗೆ ‘ಕೃಷಿ ಭಾಗ್ಯ’ ಯೋಜನೆಯನ್ನು ಸರ್ಕಾರ ಮುಂದುವರಿಸಿದೆ. ಮಳೆಗಾಲ ಹೊರತುಪಡಿಸಿ ವರ್ಷದ ಇನ್ನುಳಿದ ಅವಧಿಗೂ ನೀರಿನ ಪೂರೈಕೆಯನ್ನು ನಿರಂತರಗೊಳಿಸುವ ಉದ್ದೇಶದಿಂದ ಪ್ರಸ್ತುತ ವರ್ಷದಲ್ಲಿ ಈ ಯೋಜನೆಯಡಿ ಧಾರವಾಡ ಕೃಷಿ ಇಲಾಖೆಯು ಜಿಲ್ಲೆಯಲ್ಲಿ ಒಟ್ಟು 180 ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿ ಹೊಂದಿದೆ.</p>.<p>ಧಾರವಾಡ ಜಿಲ್ಲೆಯಲ್ಲಿ 2.61 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶ ಮಳೆಯಾಶ್ರಿತವಾಗಿದೆ. ಮಳೆ ಆಧಾರಿತ ಕೃಷಿಯನ್ನೇ ಮಾಡುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೀರಾವರಿ ಆಧಾರಿತ ಕೃಷಿ ಪ್ರದೇಶ ಕೇವಲ 0.22 ಲಕ್ಷ ಹೆಕ್ಟೇರ್ ಆಗಿದ್ದು, ಒಟ್ಟು ಕೃಷಿ ಬೆಳೆಗಳ ಕ್ಷೇತ್ರ 2.82 ಲಕ್ಷ ಹೆಕ್ಟೇರ್ ಆಗಿದೆ.</p>.<p>ಕಲಘಟಗಿಯಲ್ಲಿ ಹೆಚ್ಚು ನೀರಾವರಿ ಆಧಾರಿತ ಕೃಷಿ ಹಾಗೂ ಕುಂದಗೋಳದಲ್ಲಿ ಕಡಿಮೆ ನೀರಾವರಿ ಆಧಾರಿತ ಕೃಷಿ ಮಾಡಲಾಗುತ್ತದೆ. ಹೆಚ್ಚು ವಾಡಿಕೆ ಮಳೆ ಬೀಳುವ ತಾಲ್ಲೂಕು ಅಳ್ನಾವರ (1267.4 ಮಿ.ಮೀ.) ಹಾಗೂ ಕಡಿಮೆ ವಾಡಿಕೆ ಮಳೆ ಬೀಳುವ ತಾಲ್ಲೂಕು ನವಲಗುಂದ (630.6 ಮಿ.ಮೀ ).</p>.<p>ಜಿಲ್ಲೆಯಲ್ಲಿ ವಾರ್ಷಿಕವಾಗಿ ಸುರಿಯುವ ವಾಡಿಕೆ ಮಳೆಯ ಪೈಕಿ ಬೇಸಿಗೆಯಲ್ಲಿ 5.0 ಮಿ.ಮೀ, ಪೂರ್ವ ಮುಂಗಾರು 120.4 ಮಿ.ಮೀ, ಮುಂಗಾರು 513.9 ಮಿ.ಮೀ, ಹಿಂಗಾರು 147.8 ಮಿ.ಮೀ, ಸೇರಿದಂತೆ ಒಟ್ಟು 787.1 ಮಿ.ಮೀ, ಮಳೆಯಾಗುತ್ತದೆ.</p>.<p>ಸದ್ಯ ಪೂರ್ವ ಮುಂಗಾರು ಆರಂಭಗೊಂಡಿದ್ದು, ಈ ಮಳೆ ನೀರನ್ನು ಹರಿದುಹೋಗಲು ಬಿಡದೆ ಹೊಲದ ಒಂದು ಮೂಲೆಯಲ್ಲಿ ಹೊಂಡ ತೆಗೆದು ನೀರನ್ನು ಸಂಗ್ರಹಿಸಲು ರೈತರು ಮುಂದಾಗಿದ್ದಾರೆ. ಯೋಜನೆಯಡಿ ವಿವಿಧ ಕಾರ್ಯಗಳಿಗೆ ಸಹಾಯಧನವೂ ಸಿಗುವುದರಿಂದ ರೈತರು ಕೃಷಿ ಹೊಂಡ ನಿರ್ಮಾಣದತ್ತ ಚಿತ್ತ ಹರಿಸುತ್ತಿದ್ದು, ಕೃಷಿ ಹೊಂಡ ಯೋಜನೆಗೆ ರೈತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.</p>.<p>‘2025–26ನೇ ಸಾಲಿನಲ್ಲಿ ಧಾರವಾಡ ತಾಲ್ಲೂಕಿನಲ್ಲಿ 157, ನವಲಗುಂದದಲ್ಲಿ 95, ಕುಂದಗೋಳದಲ್ಲಿ 88, ಹುಬ್ಬಳ್ಳಿಯಲ್ಲಿ 85, ಕಲಘಟಗಿಯಲ್ಲಿ 62, ಅಣ್ಣಿಗೇರಿಯಲ್ಲಿ 55 ಹಾಗೂ ಅಳ್ನಾವರ ತಾಲ್ಲೂಕಿನಲ್ಲಿ 16 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ’ ಎಂದು ಧಾರವಾಡ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಸಹಾಯಧನ</strong></p><p>ಮಣ್ಣಿನಲ್ಲಿ ಕಪ್ಪು, ಕೆಂಪು, ಜಂಬಿಟ್ಟಿಗೆ ಮಣ್ಣು ಎಂಬ ವಿಧಗಳಿದ್ದು, ‘ಕೃಷಿ ಭಾಗ್ಯ’ ಪ್ಯಾಕೇಜ್ನಲ್ಲಿ ರೈತರು ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ –(10×10×3 / 12×12×3 / 15×15×3 / 18×18×3 / 21×21×3 ಮೀ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹಾಸು (250/420 GSM), ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಹೊಂಡದಿಂದ ನೀರು ಎತ್ತಲು ಡೀಸೆಲ್, ಪೆಟ್ರೋಲ್, ಸೌರ ಪಂಪ್ಸೆಟ್ ಅವಳಡಿಸಿಕೊಳ್ಳುವುದು, ನೀರನ್ನು ಬೆಳೆಗಳಿಗೆ ಹಾಯಿಸಲು ತುಂತುರು/ಹನಿ ನೀರಾವರಿ ವ್ಯವಸ್ಥೆ ಸೇರಿ ಒಟ್ಟು 6 ಘಟಕಗಳನ್ನು ರೈತರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆ ಸೂಚಿಸಿದೆ.</p><p>ಕೃಷಿ ಹೊಂಡ ನಿರ್ಮಾಣ ಹಾಗೂ ಪಾಲಿಥೀನ್ ಶೀಟ್ ಖರೀದಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ 80ರಷ್ಟು, ಪರಿಶಿಷ್ಟ ವರ್ಗದ ರೈತರಿಗೆ ಶೇ 90ಷ್ಟು ಸಹಾಯಧನ ನಿಗದಿಪಡಿಸಿದೆ. ಕ್ಷೇತ್ರ ಬದು ನಿರ್ಮಾಣಕ್ಕೆ ಸಾಮಾನ್ಯ ವರ್ಗದ ರೈತರಿಗೆ ಶೇ80 ರಷ್ಟು ಹಾಗೂ ಪರಿಶಿಷ್ಟ ವರ್ಗದ ರೈತರಿಗೆ ಶೇ 90ರಷ್ಟು, ಕೃಷಿ ಹೊಂಡದ ಸುತ್ತ ರಕ್ಷಣೆಗಾಗಿ ಬೇಲಿ ನಿರ್ಮಾಣವನ್ನು ಕಡ್ಡಾಯಗೊಳಿಸಿ, ಇದಕ್ಕಾಗಿ ಸಾ.ವರ್ಗಕ್ಕೆ ಶೇ 40 ಮತ್ತು ಪ. ವರ್ಗಕ್ಕೆ ಶೇ 50ರಷ್ಟು ಸಹಾಯಧನ ನೀಡುತ್ತಿದೆ. ಹೊಂಡದಿಂದ ನೀರು ಎತ್ತಲು ಪಂಪ್ಸೆಟ್ (10 ಎಚ್.ಪಿವರೆಗೆ) ಸಾ. ವರ್ಗಕ್ಕೆ ಶೇ 80, ಪ. ವರ್ಗಕ್ಕೆ ಶೇ90 ಬೆಳೆಗಳಿಗೆ ನೀರು ಹಾಯಿಸಲು ನೀರಾವರಿ ಸೌಕರ್ಯಕ್ಕೆ ಸಾ. ವರ್ಗಕ್ಕೆ ಶೇ 90, ಪ. ವರ್ಗಕ್ಕೆ ಶೇ 90 ಸಹಾಯಧನ ನೀಡುತ್ತಿದೆ. </p>.<div><blockquote>ಇಲಾಖೆ ನಿಯಮಾನುಸಾರವೇ ರೈತರು ಕೃಷಿ ಹೊಂಡಗಳನ್ನು ನಿರ್ಮಿಸಬೇಕು. ಐದು ವರ್ಷಗಳ ಅವಧಿಯಲ್ಲಿ ಕೃಷಿ ಹೊಂಡದಲ್ಲಿ ಜನ, ಜಾನುವಾರು ಬಿದ್ದು ಮೃತಪಟ್ಟ ಯಾವುದೇ ಘಟನೆಗಳು ವರದಿಯಾಗಿಲ್ಲ. </blockquote><span class="attribution">– ಮಂಜುನಾಥ ಅಂತರವಳ್ಳಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಧಾರವಾಡ</span></div>.<div><blockquote>ಕೃಷಿ ಇಲಾಖೆ ಸಹಾಯಧನದಲ್ಲಿ 100 ಅಡಿ ಉದ್ದ, 100 ಅಡಿ ಅಗಲ ಹಾಗೂ 10 ಅಡಿ ಆಳದ ಕೃಷಿಹೊಂಡ ನಿರ್ಮಿಸಿಕೊಂಡಿದ್ದು, ಹೊಂಡದ ಸುತ್ತ ತಂತಿಬೇಲಿ ಹಾಕಲಾಗಿದೆ </blockquote><span class="attribution">– ಗಂಗಪ್ಪ ಕಾಲವಾಡ, ರೈತ, ಮೊರಬ ಗ್ರಾಮ, ನವಲಗುಂದ</span></div>.<div><blockquote>ನಮ್ಮದು 3 ಎಕರೆ ಕೃಷಿ ಭೂಮಿ ಇದ್ದು, ಮಾವು, ಕಬ್ಬು, ಗೋವಿನಜೋಳ ಬೆಳೆಯುತ್ತೇವೆ. ಬೋರ್ವೆಲ್ ನೀರನ್ನು ಹೊಂಡದಲ್ಲಿ ತುಂಬಿ ಇಟ್ಟುಕೊಂಡು ಅಗತ್ಯ ಬಿದ್ದಾಗ ಬಳಸುತ್ತೇವೆ </blockquote><span class="attribution">– ರುದ್ರಪ್ಪ ಗಣಪತಿ ಮಟಗೇರ್, ರೈತ, ಕೋಗಿಲಗೇರಿ ಗ್ರಾಮ, ಅಳ್ನಾವರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>