<p><strong>ಕುಂದಗೋಳ</strong>: ತಾಲ್ಲೂಕಿನಲ್ಲಿ ಬುಧವಾರ ಸಂಜೆ ಭಾರಿ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಅಲ್ಲಲ್ಲಿ ಗಿಡ ಮರಗಳು ಬಿದ್ದಿದ್ದು, ಅಂಗಡಿಗಳ ತಗಡು ಹಾರಿ ಹಾನಿ ಉಂಟಾಗಿದೆ.</p>.<p>ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಬೀಡಿ ಅಂಗಡಿ ಹಾಗೂ ಅಂಗನವಾಡಿಯ ತಗಡು ಹಾರಿವೆ. ಹುಬ್ಬಳ್ಳಿ– ಲಕ್ಷ್ಮೇಶ್ವರ ರಸ್ತೆಯ ಶೆರೆವಾಡ ಗ್ರಾಮದ ಹತ್ತಿರದ ಟೋಲ್ ಸಮೀಪದ ಅಂಗಡಿಯೊಂದರ ಮೇಲೆ ಮರ ಉರುಳಿ ಬಿದ್ದಿದೆ. ಗುಡೇನಕಟ್ಟಿ– ಯರಿನಾರಾಯಣಪುರ ರಸ್ತೆ ಮಧ್ಯೆ ಮರವೊಂದು ಉರುಳಿದೆ.</p>.<p>ಪ್ರವಾಸಿ ಮಂದಿರದ ಹತ್ತಿರ ವಿದ್ಯುತ್ ಪರಿವರ್ತಕದ ಮೇಲೆ ಹಾಗೂ ಹೊಂಡದ ಹತ್ತಿರ ವಿದ್ಯುತ್ ತಂತಿ ಮೇಲೆ ಮರದ ಟೊಂಗೆಗಳು ಬಿದ್ದು ಕೆಲವು ಭಾಗಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.</p>.<p>ಕಲಘಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬುಧವಾರ ಮಳೆರಾಯ ಅಬ್ಬರಿಸಿದ್ದು, ಅಲ್ಲಲಿ ವಿದ್ಯುತ್ ಕಂಬಗಳು ಹಾಗೂ ಗಿಡ ಮರಗಳು ನೆಲಕ್ಕೆ ಉರುಳಿವೆ.</p>.<p>ಪಟ್ಟಣದ ಪೊಲೀಸ್ ಠಾಣೆ, ಆಂಜನೇಯ ವೃತ್ತ ಹಾಗೂ ವಿವಿಧ ಕಡೆ ಮರಗಳು, ವಿದ್ಯುತ್ ಕಂಬ ತಂತಿಗಳು ಹರಿದು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.</p>.<p>ಮಳೆಗಿಂತ ಗಾಳಿಯೇ ಹೆಚ್ಚಾಗಿದ್ದರಿಂದ ಹೆಚ್ಚಿನ ಮರಗಳು ನೆಲಕ್ಕುರುಳಿವೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-24-1813245971</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಗೋಳ</strong>: ತಾಲ್ಲೂಕಿನಲ್ಲಿ ಬುಧವಾರ ಸಂಜೆ ಭಾರಿ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಅಲ್ಲಲ್ಲಿ ಗಿಡ ಮರಗಳು ಬಿದ್ದಿದ್ದು, ಅಂಗಡಿಗಳ ತಗಡು ಹಾರಿ ಹಾನಿ ಉಂಟಾಗಿದೆ.</p>.<p>ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಬೀಡಿ ಅಂಗಡಿ ಹಾಗೂ ಅಂಗನವಾಡಿಯ ತಗಡು ಹಾರಿವೆ. ಹುಬ್ಬಳ್ಳಿ– ಲಕ್ಷ್ಮೇಶ್ವರ ರಸ್ತೆಯ ಶೆರೆವಾಡ ಗ್ರಾಮದ ಹತ್ತಿರದ ಟೋಲ್ ಸಮೀಪದ ಅಂಗಡಿಯೊಂದರ ಮೇಲೆ ಮರ ಉರುಳಿ ಬಿದ್ದಿದೆ. ಗುಡೇನಕಟ್ಟಿ– ಯರಿನಾರಾಯಣಪುರ ರಸ್ತೆ ಮಧ್ಯೆ ಮರವೊಂದು ಉರುಳಿದೆ.</p>.<p>ಪ್ರವಾಸಿ ಮಂದಿರದ ಹತ್ತಿರ ವಿದ್ಯುತ್ ಪರಿವರ್ತಕದ ಮೇಲೆ ಹಾಗೂ ಹೊಂಡದ ಹತ್ತಿರ ವಿದ್ಯುತ್ ತಂತಿ ಮೇಲೆ ಮರದ ಟೊಂಗೆಗಳು ಬಿದ್ದು ಕೆಲವು ಭಾಗಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.</p>.<p>ಕಲಘಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬುಧವಾರ ಮಳೆರಾಯ ಅಬ್ಬರಿಸಿದ್ದು, ಅಲ್ಲಲಿ ವಿದ್ಯುತ್ ಕಂಬಗಳು ಹಾಗೂ ಗಿಡ ಮರಗಳು ನೆಲಕ್ಕೆ ಉರುಳಿವೆ.</p>.<p>ಪಟ್ಟಣದ ಪೊಲೀಸ್ ಠಾಣೆ, ಆಂಜನೇಯ ವೃತ್ತ ಹಾಗೂ ವಿವಿಧ ಕಡೆ ಮರಗಳು, ವಿದ್ಯುತ್ ಕಂಬ ತಂತಿಗಳು ಹರಿದು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.</p>.<p>ಮಳೆಗಿಂತ ಗಾಳಿಯೇ ಹೆಚ್ಚಾಗಿದ್ದರಿಂದ ಹೆಚ್ಚಿನ ಮರಗಳು ನೆಲಕ್ಕುರುಳಿವೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-24-1813245971</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>