ಈ ವಲಯ ತನ್ನ ಹಿಂದಿನ ಪಂದ್ಯಗಳಲ್ಲಿ ರಾಯಚೂರು, ಅಧ್ಯಕ್ಷರ ಇಲೆವನ್, ಬೆಂಗಳೂರು ನಗರ, ಉಪಾಧ್ಯಕ್ಷರ ಇಲೆವನ್ ಮತ್ತು ತುಮಕೂರು ವಲಯ ತಂಡಗಳನ್ನು ಮಣಿಸಿ ಈ ಸಾಧನೆ ಮಾಡಿತು. ಒಟ್ಟು 16 ವಿಕೆಟ್ಗಳನ್ನು ಕಬಳಿಸಿದ ಧಾರವಾಡ ವಲಯದ ರೋಹಿತ್ ಕುಮಾರ ಎ.ಸಿ. ಟೂರ್ನಿಯಲ್ಲಿ ಒಟ್ಟು ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಗೌರವಕ್ಕೆ ಭಾಜನರಾದರು.