ಹುಬ್ಬಳ್ಳಿ: ‘ಶಾಲೆ ತೆರೆಯಲು ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡವಿದೆ. ಆದರೆ, ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ, ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಲ್ಲಿ ಇನ್ನೂ ಆತಂಕವಿದೆ. ಹಾಗಾಗಿ, ಏಕಾಏಕಿ ಶಾಲೆಗಳನ್ನು ಆರಂಭಿಸುವುದು ಬೇಡ. ಬದಲಿಗೆ, ಪ್ರಾಯೋಗಿಕವಾಗಿ ಕೆಲ ಶಾಲೆಗಳನ್ನು ಆರಂಭಿಸಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವಜಗದೀಶ ಶೆಟ್ಟರ್ಸಲಹೆ ನೀಡಿದರು.