ಹುಬ್ಬಳ್ಳಿ: ‘ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರ್ಪಡೆ ಮಾಡುವುದರಲ್ಲಿ ತಪ್ಪೇನು ಇಲ್ಲ. ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಬಾರದು’ ಎಂದುಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದರು.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ವಿಚಾರದಲ್ಲಿ ಜಾತಿವಾದಿಗಳು, ಹುಸಿ ಜಾತ್ಯತೀತವಾದಿಗಳು ವಾದ ಮಾಡಬಾರದು. ಎಲ್ಲರೂ ಈ ನಿರ್ಧಾರ ಸ್ವಾಗತಿಸಬೇಕು’ ಎಂದು ಅವರು ಹೇಳಿದರು.
‘ಸಮಾಜದಲ್ಲಿ ಈಚೆಗೆ ನೈತಿಕ ಶಿಕ್ಷಣ ಕಡಿಮೆ ಆಗುತ್ತಿದೆ. ನಮ್ಮ ಮಕ್ಕಳಿಗೆ ನೈತಿಕತೆ, ಇತಿಹಾಸ ಹಾಗೂ ಧರ್ಮದ ಬೋಧನೆ ಆಗಬೇಕಿದೆ. ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರಿಂದ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಲಭಿಸಲಿದೆ’ ಎಂದರು.
ಭಗವದ್ಗೀತೆಯ ವಿಷಯ ಪಠ್ಯದಲ್ಲಿ ಸೇರ್ಪಡೆಗೆ ಸ್ವಾಗತಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಅವರಿಗೆ ಸದ್ಬುದ್ಧಿ ಬಂದಿದ್ದರೆ ಅದೂ ಸ್ವಾಗತಾರ್ಹ’ ಎಂದರು.