ನನಗೆ ಕೋವಿಡ್ ಖಚಿತವಾದ ಮೊದಲ ದಿನ ಸ್ನೇಹಿತರೊಬ್ಬರು ದೂರವಾಣಿ ಕರೆ ಮಾಡಿ ಅಶೋಕ ಗಸ್ತಿ, ಸುರೇಶ ಅಂಗಡಿ ಕೋವಿಡ್ ಬಂದು ಮೃತಪಟ್ಟರು. ಈಗ ನಿಮಗೆ ಬಂದಿದೆ ಎಂದರು. ಅವರು ಕಾಳಜಿಪೂರ್ವಕವಾಗಿ ಈ ಮಾತುಗಳನ್ನು ಆಡಿದ್ದರೂ, ಸೋಂಕಿತರ ಆಗಿನ ಮನಸ್ಥಿತಿಗೆ ನಕಾರಾತ್ಮಕವಾಗಿಯೇ ಅನಿಸುತ್ತವೆ. ಈ ವಿಷಯವನ್ನು ವೈದ್ಯರ ಜೊತೆ ಹಂಚಿಕೊಂಡಾಗ ಅವರು ಕೆಲ ದಿನಗಳ ಕಾಲ ಯಾರ ಫೋನ್ಗಳನ್ನೂ ಸ್ವೀಕರಿಸಬೇಡಿ. ಬೇಗನೆ ಗುಣಮುಖರಾಗುತ್ತೀರಿ ಎಂದು ಸಲಹೆ ನೀಡಿದ್ದರು ಎಂದು ಜೋಶಿ ಹೇಳಿದರು. ಆದ್ದರಿಂದ ಯಾರನ್ನೂ ಭಯಪಡಿಸಬೇಡಿಎಂದರು.