ಇಲ್ಲಿನ ಕಮಲಾಪುರ ಸುತ್ತಮುತ್ತಲಿನ ಮತಗಟ್ಟೆ ಸಂಖ್ಯೆ 140, 145, 158 ಹಾಗೂ 216 ವ್ಯಾಪ್ತಿಯ ಮತದಾರರನ್ನು ಭೇಟಿ ಮಾಡಿ, ಮತದಾನದ ಮಹತ್ವ ಕುರಿತು ವಿವರಿಸಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕರಿಗೂ ಒಂದು ಮತದ ಪವಿತ್ರ ಹಕ್ಕನ್ನು ಕಲ್ಪಿಸಿದೆ. ಮತದಾನ ಮಾಡುವುದು ಎಲ್ಲರ ಕರ್ತವ್ಯವೂ ಆಗಿದೆ. ಯಾರೊಬ್ಬರೂ ಮತದಾನದಿಂದ ಹೊರಗುಳಿಯಬಾರದು’ ಎಂದರು.