ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ಐಟಿ ಸೆಲ್ ಸದಸ್ಯ ರಜತ್ ಉಳ್ಳಾಗಡ್ಡಿಮಠ, ‘ಕೇಂದ್ರ ಸರ್ಕಾರ ರಫೇಲ್ ವಿಚಾರದಲ್ಲಿ ಸಾಕಷ್ಟು ವಿಷಯಗಳನ್ನು ಸಾರ್ವಜನಿಕರಿಗೆ ಹೇಳುತ್ತಿಲ್ಲ. ನ್ಯಾಯಾಲಯದ ಹಾದಿಯನ್ನೂ ತಪ್ಪಿಸಿದೆ. ಹೀಗಾಗಿ, ಜಂಟಿ ಸದನ ಸಮಿತಿಯಿಂದಲೇ ತನಿಖೆ ನಡೆಸಬೇಕು ಎಂಬುದು ಕಾಂಗ್ರೆಸ್ ಒತ್ತಾಯ. ಹಾಗಾಗಿ, ನಮ್ಮ ವಾಟ್ಸ್ ಆ್ಯಪ್ ಹಾಗೂ ಫೇಸ್ಬುಕ್ ಡಿಪಿಗಳನ್ನು ಬದಲಿಸಿಕೊಳ್ಳುತ್ತಿದ್ದೇವೆ’ ಎಂದರು.