‘ನಾವು ಅಧಿಕಾರ ಬಂದಿರುವುದೇ ಸಂವಿಧಾನ ಬದಲಿಸಲು, ನೀವು ಮೋದಿ ಪರ ಇದ್ದರೆ ಭಾರತದ ಪರ ಇದ್ದಂತೆ, ಇಲ್ಲವಾದರೆ ಭಾರತ ವಿರೋಧಿ ಇದ್ದಂತೆ ಎಂಬಿತ್ಯಾದಿ ಬಹಿರಂಗ ಬೆದರಿಕೆ ಮೂಲಕ ದೇಶದಲ್ಲಿ ಭಯದ ವಾತಾವರಣವನ್ನು ಬಿಜೆಪಿ ನಾಯಕರು ಸೃಷ್ಟಿಸಿದ್ದಾರೆ. ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣವಾಗಿದ್ದು ಇದೇ ಸರ್ಕಾರ. ಚಿಂತಕರಾದ ಡಾ. ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ, ನರೇಂದ್ರ ದಾಬೋಲ್ಕರ್, ಗೋವಿಂದ ಪಾನ್ಸರೆ ಅವರ ಹತ್ಯೆಗಳೂ ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ನಡೆದಿವೆ. ಇವೆಲ್ಲವೂ ಅಸಹಿಷ್ಣುತೆಯನ್ನು ಮೂಡಿಸಿವೆ’ ಎಂದರು.