ಈದ್ಗಾ ಮೈದಾನದಲ್ಲಿ ಷರತ್ತಿನ ಮೇರೆಗೆ ಪಾಲಿಕೆ ಗಣೇಶೋತ್ಸವಕ್ಕೆ ಅನುಮತಿ ನೀಡಿತ್ತು. ಸೆ. 2ರಂದು ಮಧ್ಯಾಹ್ನ 12ರವರೆಗೆ ಮಾತ್ರ ಮೈದಾನದಲ್ಲಿ ಉತ್ಸವಕ್ಕೆ ಅವಕಾಶ ಕಲ್ಪಿಸಲಾಗಿತ್ತು. 11.45 ಆರ್.ಎಸ್.ಎಸ್.ನ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೆಂಡೆ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಧರ ನಾಡಗೇರ ವಿಶೇಷ ಪೂಜೆ ನೆರವೇರಿಸಿ ವಿಸರ್ಜನೆಗೆ ಚಾಲನೆ ನೀಡಿದರು.