ಸಂಘಟನಾ ಕಾರ್ಯದರ್ಶಿ ಆಸಿಫ ಶಿವಳ್ಳಿ ಮಾತನಾಡಿ, ‘ಮಸೂದೆ ಜಾರಿಯಾದರೆ ಕರ್ನಾಟಕ ವಿದ್ಯುತ್ ನಿಗಮ, ಕೆಪಿಟಿಸಿಎಲ್, ಹೆಸ್ಕಾಂ ಎಲ್ಲಾ ಎಸ್ಕಾಂಗಳು,ವಿದ್ಯುತ್ ಉತ್ಪಾದನೆ, ಸರಬರಾಜು ಹಾಗೂ ವಿತರಣೆಯ ಕಂಪನಿಗಳು ಕಾರ್ಪೊರೇಟ್ ಕಂಪನಿಗಳ ಕೈವಶವಾಗಲಿವೆ. ಇದರಿಂದ ಕ್ರಾಸ್ ಸಬ್ಸಿಡಿಗೆ ಹೊಡೆತ ನೀಡಿ, ಸೇವಾ ಯೋಜನೆಗಳು ಇಲ್ಲವಾಗಿ ಗ್ರಾಹಕರ ಲೂಟಿಗೆ ಕಾರಣವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.