ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಂಕ್ರಪ್ಪ ಮಾದನಭಾವಿ ಮಾತನಾಡಿ, ರೈತರಿಗೆ ತಾವು ಬೆಳೆದ ಬೆಳೆಗೆ ಉತ್ಪಾದನೆ ವೆಚ್ಚದ ಆಧಾರದ ಮೇಲೆ ಲಾಭದಾಯಕ ಬೆಲೆ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನೀಡಿದರೆ ರೈತರ ಆದಾಯ ದ್ವಿಗುಣ ಆಗದು, ರೈತನ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು. ರುದ್ರಗೌಡ ಪಾಟೀಲ, ಸಿದ್ದಯ್ಯ ಕಟ್ನೂರಮಠ, ಉಳವಪ್ಪ ಬಳಿಗೇರ, ಸುರೇಶ ಮಂಜರಗಿ, ಜಗದೀಶ ದ್ಯಾವಪ್ಪನವರ, ಕಲ್ಲಪ್ಪ ತಡಸ, ಶಿವಾನಂದ ಸಾವಳಗಿ, ಮಹಾದೇವಪ್ಪ ರಾಮನಾಳ, ಶಂಕರಗೌಡ ಪಾಟೀಲ, ಶಿವಾನಂದ ಕಂಪ್ಲಿ, ಮಣ್ಣಪ್ಪ ಜಾಲಿಹಾಳ ಇದ್ದರು.