‘ಉಪ್ಪಿನಬೆಟಗೇರಿ, ಅಮ್ಮಿನಭಾವಿ, ಹೆಬ್ಬಳ್ಳಿ ಗ್ರಾಮದ ರೈತ ಸಂಪರ್ಕ ಕೇಂದ್ರಗಳಲ್ಲಿ 6,500 ಕ್ವಿಂಟಲ್ ಕಡಲೆ, 30 ಕ್ವಿಂಟಲ್ ಜೋಳ, 15 ಕ್ವಿಂಟಲ್ ಗೋಧಿ ಬೀಜವನ್ನು ವಿತರಿಸಲಾಗಿದೆ. ಬೀಜೊಪಚಾರ ಮಾಡಿ ಬಿತ್ತನೆ ಮಾಡಲು ರೈತರಿಗೆ ತಿಳಿಸಲಾಗಿದೆ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರೇಖಾ ಬೆಳ್ಳಬ್ಬಿ ಮಾಹಿತಿ ನೀಡಿದರು.